ಟಂಕಾಗಳು

Must Read


ಭುಗಿಲೆದ್ದಿದೆ
ಜಗವು ಭಯದಲಿ
ಮಹಾಮಾರಿಯೇ
ನೀ ತಂದ ಫಜೀತಿಗೆ
ಸಾವೂ ಹೆದರುತಿದೆ


ಒಕ್ಕಲೆದ್ದಿದೆ
ನೆಲೆಯು ಸಿಗದಲೆ
ಮಾರಿ ಕೊರೋನಾ
ಹೆಚ್ಚುವ ಭೀತಿಯಲಿ
ಹುಚ್ಚು ಹಿಡಿಯುತಿದೆ


ಭಯಗೊಂಡಿದೆ
ಜಗದ ಜನವಿಂದು
ಮಾರಿಗೌಷಧಿ
ಸಿಗದ ಕಾರಣಕೆ
ಸಾವಿಗೆ ಹೆದರಿದೆ


ದಿಕ್ಕುಗಾಣದೆ
ಜನ ಕಂಗಾಲಾಗಿದೆ
ಸಾವು ನೋವಿನ
ಲೆಕ್ಕ ಸಿಗದುದರ
ಭಯಕೆ ಬೆದರಿದೆ


ರೋಗ ಮುಕ್ತಿಗೆ
ಭವವು ಬಯಸಿದೆ
ಕೈ ಮುಗಿಯತ
ಮೊರೆಯನಿಡುತಿದೆ
ಧರೆಯ ದೇವರಲಿ.

ಡಾ.ಗಜಾನಂದ ಸೊಗಲನ್ನವರ
ಚಿಕ್ಕಬಾಗೇವಾಡಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group