ಬೆಳಗಾವಿ – ಜಿಲ್ಲಾ ಪಂಚಾಯತ್ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ನಗರ ಇವರ ಸಂಯುಕ್ತ ನೇತೃತ್ವದಲ್ಲಿ ಬೆಳಗಾವಿ ನಗರದ ಮಹಾಂತ ಭವನದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪ್ರದಾನ ಮತ್ತು ನಿವೃತ್ತ ಶಿಕ್ಷಕರ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ನೌಕರರ ಸಂಘದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿಗಳು ಜಗದೀಶಗೌಡ ಪಾಟೀಲ್ ರು ಉದ್ಘಾಟಿಸಿದರು,
ಪ್ರಾರಂಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಎನ್ ಆರ್ ಪಾಟೀಲ ರವರು ಸರ್ವರನ್ನೂ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಬೆಳಗಾವಿ ಶಾಸಕರು ತಮ್ಮ ಅನುಪಸ್ಥಿತಿಯಲ್ಲಿ ಶಿಕ್ಷಕರಿಗೆ ನೀಡಿದ ಹಿತನುಡಿನಮನಗಳನ್ನು ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಉಪ್ಪಾರ ರವರು ನಡೆಸಿಕೊಟ್ಟರು ಜಿಲ್ಲೆಯ ಉಪನಿರ್ದೇಶಕರಾದ ಡಾ.ಎ. ಬಿ. ಪುಂಡಲೀಕ ರವರು ಡಾ.ರಾಧಾಕೃಷ್ಣನ್ ಜಿರವರ ಫೋಟೋ ಪೂಜೆ ನೆರವೇರಿಸಿ ಅಧ್ಯಕ್ಷೀಯ ಮಾತುಗಳನ್ನು ಹೇಳಿದರು.
ವೇದಿಕೆಯ ಮೇಲೆ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ವೈ ಜೆ ಭಜಂತ್ರಿ , ಪ್ರಾಥಮಿಕ ಶಾಲಾ ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಜಯಕುಮಾರ ಹೆಬಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಎ. ಎಸ್.ಅಣ್ಣಿಗೇರಿ, ಪ್ರಧಾನ ಗುರುಗಳ ಸಂಘದ ಅಧ್ಯಕ್ಷರಾದ ಮಠದ , ಪ್ರಾ ಶಾ ಶಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಗೋಣಿ, ಶಿಕ್ಷಕರ ಸಂಘದ ಬೆಳಗಾವಿ ನಗರ ಅಧ್ಯಕ್ಷರಾದ ಬಾಬು ಸೊಗಲನ್ನವರ ರವರು ಉಪಸ್ಥಿತರಿದ್ದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಈ ವರ್ಷ ನಿವೃತ್ತರಾದ ಶಿಕ್ಷಕ ಶಿಕ್ಷಕಿಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಬಿಇಓ ವೈ ಜೆ ಭಜಂತ್ರಿ ವಂದನೆಗಳನ್ನು ತಿಳಿಸಿದರು. ಜಿಲ್ಲಾ ಪದಾಧಿಕಾರಿಯರಾದ ಶ್ರೀಮತಿ ರೇಖಾ ಅಂಗಡಿ,ಶಿಕ್ಷಕಿಯರಾದ ಶ್ರೀಮತಿ ಖನಗಣ್ಣಿ ಹಾಗೂ ಸಂಗಡಿಗರು ನಾಡಗೀತೆ-ರೈತಗೀತೆ ನಡೆಸಿಕೊಟ್ಟರು. ಜಿಲ್ಲಾ ನೌಕರರ ಸಂಘದ ಪದಾಧಿಕಾರಿ ಶ್ರೀಮತಿ ಅಂಜನಾ ಮುರಗೋಡ ಹಾಗೂ ಶಿಕ್ಷಕರಾದ ದೇಶನೂರ ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ DDPI ಹಾಗೂ BEO ಕಚೇರಿಗಳ ಎಲ್ಲ ಹಿರಿಯ ಅಧಿಕಾರಿಗಳು ಹಾಗೂ CRP, BRP ,ECO ರವರುಗಳು ಮತ್ತು ಶಿಕ್ಷಕರ ಜಿಲ್ಲಾ ಸಂಘದ ,ತಾಲೂಕಾ ಸಂಘದ ಎಲ್ಲ ಪದಾಧಿಕಾರಿಗಳು ಹಾಜರಿದ್ದು ಯಶಸ್ವಿಗೊಳಿಸಿ ಶೋಭೆ ತಂದರು. ಮಾಧ್ಯಮ ಮಿತ್ರರು ಹಾಗೂ ಜಿಲ್ಲೆಯ ವಿವಿಧ ವಲಯಗಳ ಶಿಕ್ಷಕ ಸಹೋದರ-ಸಹೋದರಿಯರು ಭಾಗವಹಿಸಿದ್ದರು.
ವರದಿ: KSPSTA ರಿ. ಶಿಕ್ಷಕರ ಸಂಘ ಜಿಲ್ಲಾ ಘಟಕ, ಬೆಳಗಾವಿ