spot_img
spot_img

ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು – ಬ್ರಹ್ಮಕುಮಾರಿ ರೇಖಾಜೀ ಅಭಿಪ್ರಾಯ

Must Read

spot_img
- Advertisement -

ಮೂಡಲಗಿ: ‘ಗುರು ಶಿಷ್ಯರ ಸಂಬಂಧವು ಪವಿತ್ರವಾಗಿದ್ದು,ವಿಧೆಯತೆಯ ಮೂಲಕ ಗುರುವಿನ ಸಾಕಾರತೆಯನ್ನು ಶಿಷ್ಯರು ಕಾಣಬೇಕು’ ಎಂದು ಬ್ರಹ್ಮಕುಮಾರಿ ರೇಖಾಜೀ ಅವರು ಹೇಳಿದರು.

ಇಲ್ಲಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಚರಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರು ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಗುರು ಆದವರು ಶಿಷ್ಯರನ್ನು ಬೆಳೆಸುವ ಎಲ್ಲ ಸಾಮರ್ಥ್ಯವನ್ನು ಹೊಂದಿರಬೇಕು ಎಂದರು.

ಗುರು ಜ್ಞಾನವನ್ನು ನೀಡುವ ಪುಸ್ತಕದ ಭಂಡಾರವಿದ್ದಂತೆ. ಎಲ್ಲರನ್ನು ಜ್ಞಾನವಂತರನ್ನಾಗಿಸಿ ಆದರ್ಶ ಜೀವನಕ್ಕೆ ದಾರಿ ತೋರಬೇಕು. ಪ್ರೀತಿ, ವಿಶ್ವಾಸಗಳು ಶಾಶ್ವತವಾಗಿ ಉಳಿಯಬೇಕು ಎಂದರು.

- Advertisement -

ಬ್ರಹ್ಮಕುಮಾರಿ ರೇಖಾಜೀ ಹಾಗೂ ಬ್ರಹ್ಮಕುಮಾರಿ ಸವಿತಾಜೀ ಅವರನ್ನು ಭಕ್ತವೃಂದವು ಸನ್ಮಾನಿಸಿ ಗೌರವಿಸಿದರು.

ಶಿವಪುತ್ರಯ್ಯ ಮಠಪತಿ, ಯಲ್ಲಪ್ಪ ಕುಲಿಗೋಡ, ಗುರಲಿಂಗಪ್ಪ ಶೀಲವಂತ, ಮಲ್ಲಿಕಾರ್ಜುನ ಎಮ್ಮಿ, ಶಿವಬಸು ಗುರವ, ತುಂಗವ್ವ ಸೋನವಾಲಕರ, ಸುಮಿತ್ರಾ ಸೊನವಾಲಕರ, ಮಹಾದೇವಿ ತಾಂವಶಿ, ರಜನಿ ಬಂದಿ, ಮಂಗಲಾ ಬಡ್ಡಿ, ಲಕ್ಷ್ಮೀ ಇದ್ದರು.

- Advertisement -
- Advertisement -

Latest News

ಗುಬ್ಬೆವಾಡ  ಚೌಡೇಶ್ವರಿ ದೇವಸ್ಥಾನಲ್ಲಿ ನರೇಗಾ ದಿನಾಚರಣೆ

ಸಿಂದಗಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಕೇವಲ ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group