ಅಕ್ರಮ ಮದ್ಯ ಸಾಗಾಣಿಕೆ; 4.85 ಲಕ್ಷ ಮೌಲ್ಯದ ಮದ್ಯ ಜಪ್ತಿ

Must Read

ಬೀದರ – ಬೀದರ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಖದಿಮರಿಗೆ ಹೆಡೆಮುರಿ ಕಟ್ಟಿರುವ ಅಬಕಾರಿ ಇಲಾಖೆ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಸಂಗನಗೌಡ ಇವರ ನೇತೃತ್ವದಲ್ಲಿ ಬಸವಕಲ್ಯಾಣ ತಾಲ್ಲೂಕಿನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಕ್ರಮ ಮದ್ಯ ಸಂಗ್ರಹಣೆ, ಸಾಗಾಣಿಕೆಗೆ ಸಂಬಂಧಿಸಿದಂತೆ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಇದ್ದ 37.620 ಲೀಟರ ಮದ್ಯ, ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕೆ ಇದ್ದ 25.020 ಲೀಟರ್ ಮದ್ಯ ಒಟ್ಟು 62.640 ಲೀ, 35.550 ಲೀಟರ್ ಬಿಯರ್, ಒಂದು ದ್ವಿಚಕ್ರ ವಾಹನ, ಒಂದು ಮಾರುತಿ ಸುಜೂಕಿ ಎರ್ಟಿಗಾ ಕಾರು, 600 ರೂ. ನಗದು ಹಣ ಸೇರಿ ಒಟ್ಟು 4.85,598 ಲಕ್ಷ ಮೌಲ್ಯದ ವಸ್ತುಗಳನ್ನು ಆರೋಪಿಗಳಿಂದ ಜಪ್ತಿ ಮಾಡಿದ್ದಾರೆ.

ಆರೋಪಿಗಳಾದ:

  1. ಭೂಷಣ ತಂದೆ ಕುಪಣ್ಣ ಬಿರಾದಾರ ಸಾ: ಕುಬಮೋಳ ಗ್ರಾಮ, ತಾ:ಕಮಲಾಪೂರ, ಜಿ:ಕಲಬುರಗಿ.
  2. ಶಿವಶರಣ ತಂದೆ ಶಾಮರಾವ ಬಗದೊರೆ ಸಾ: ಶರಣನಗರ ಮುಡಬಿ ಗ್ರಾಮ, ತಾ: ಬಸವಕಲ್ಯಾಣ
  3. ಶಿವಕುಮಾರ ತಂದೆ ದತ್ತಾತ್ರೀ ಸಾ: ಮುಡಬಿ ಗ್ರಾಮ, ತಾ.ಬಸವಕಲ್ಯಾಣ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಉಪಆಯುಕ್ತರು, ಬೀದರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ ಉಪವಿಭಾಗದ ಅಬಕಾರಿ ಉಪಅಧೀಕ್ಷಕರಾದ ಆನಂದ ಉಕ್ಕಲಿ, ಅಬಕಾರಿ ನಿರೀಕ್ಷಕರಾದ ಸುರೇಶ ಶಂಕರ, ಅಬಕಾರಿ ಉಪನಿರೀಕ್ಷಕರಾದ ದಿಲೀಪಸಿಂಗ್ ಠಾಕೂರ, ಜಿಲ್ಲಾ ಸ್ಕ್ವಾಡ್ ಹಾಗೂ ಇತರೆ ಅಬಕಾರಿ ಸಿಬ್ಬಂದಿಗಳು ದಾಳಿ ಸಂದರ್ಭದಲ್ಲಿ ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group