ರಾಧಾ ಶಾಮರಾವ ಕವನ

Must Read

ವೀರ ಮರಣ

ಕಾಗಿ೯ಲ್ ಯುದ್ಧ ಸನ್ನಧ್ಧ ಸೈನಿಕ
ಗಮನಿಸಲಿಲ್ಲ
ಹೊಸ ಸಂಸಾರ
ಪುಟ್ಟ ಹಸುಳೆ
ಎಲ್ಲಕ್ಕಿಂತ ಮಿಗಿಲು
ಭಾರತಾಂಬೆಯ ಸೇವೆ

ಸದೆಬಡಿದ ಶತ್ರುಗಳ
ಹಿಂದಿನಿಂದ
ಬಡಿಯಿತು ಗುಂಡು
ತಿರುಗಿದ ಗುಂಡಿನ
ಮಳೆಗರೆದ
ಜಯ ಭಾರತ ಮಾತೆಎನುತ
ವೀರಮರಣವನಪ್ಪಿದ

ನಮನ ಒಂದೇ ಸಾಕೇ?
ಪ್ರಾಥಿ೯ಸೋಣ ;
ಅವನ ಚಿತೆಯ
ಭಸ್ಮದ ಕಣಕಣದಿ
ಹುಟ್ಟಿ ಬರಬೇಕು
ತೋರಿ ವಿರಾಟ್ ರೂಪ

ಮತ್ತೆ ಓಟ ಕಾಗಿ೯ಲ್ ಕಡೆಗೆ
ಶತ್ರುಗಳ ಮಾರಣ ಹೋಮಕೆ.
ಜಯಹಿಂದ ಜೈಭಾರತಾಂಬೆ.

ರಾಧಾಶಾಮರಾವ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group