Homeಸುದ್ದಿಗಳು18 ನೇ ವಾರ್ಷಿಕ ಮಹಾ ಸಭೆ

18 ನೇ ವಾರ್ಷಿಕ ಮಹಾ ಸಭೆ

ಹತ್ತಿಮತ್ತೂರ: ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿಮತ್ತೂರ ತಾ:ಸವಣೂರು ಜಿ: ಹಾವೇರಿ ಇಲ್ಲಿ ದಿನಾಂಕ 17-10-2021 ರಂದು ಬೆಳಿಗ್ಗೆ 10:00 ಘಂಟೆಗೆ ಶಿಕ್ಷಕರ ಬಳಗದ ಸರ್ವ ಸದಸ್ಯರ ಮಹಾ ಸಭೆಯನ್ನು ಕರೆಯಲಾಗಿತ್ತು.

ಸಭೆಯ ಅಧ್ಯಕ್ಷರಾಗಿ ಬಳಗದ ಹಿರಿಯ ಶಿಕ್ಷಕರು ಹಾಗೂ ಬಳಗದ ಅಧ್ಯಕ್ಷರಾದ ಬಿ ಕೆ ತಾಯಮ್ಮ ನವರ ಅವರು ವಹಿಸಿಕೊಂಡರು.

ಮಹಾ ಸಭೆಯನ್ನು ಮಹಾಲಕ್ಷ್ಮಿ ಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ಸಭೆಯಲ್ಲಿ ಬಳಗದ ನಿರ್ದೇಶಕರನ್ನು ಹಾಗೂ ಸರ್ವ ಸದಸ್ಯರನ್ನು ಸಹ ಕಾರ್ಯದರ್ಶಿ ಎನ್ ಎನ್ ಮಾಸಣಗಿರವರು ಸ್ವಾಗತಿಸಿದರು. ನಂತರ 2020-21 ರಲ್ಲಿ ಬಳಗದ ವಾರ್ಷಿಕ ಲೆಕ್ಕ ಪತ್ರಗಳ ಮೇಲೆ ಚರ್ಚೆ ನಡೆಯಿತು. ಇದನ್ನು ಬಳಗದ ಪ್ರಧಾನ ಕಾರ್ಯದರ್ಶಿ ಎಸ್ ಡಿ ಅರಳಿ ಹಳ್ಳಿ ಅವರು ನಡೆಸಿಕೊಟ್ಟರು.

ಹೊಸ ನಿಯಮಗಳನ್ನು ಅಧ್ಯಕ್ಷರ ಸಮ್ಮುಖದಲ್ಲಿ ಸದಸ್ಯರ ಅಪೇಕ್ಷೆಯಂತೆ ಬದಲಾವಣೆ ಮಾಡಲಾಯಿತು. ಈ ಹೊಸ ನಡಾವಳಿಗಳನ್ನು ನಡಾವಳಿ ಪುಸ್ತಕದಲ್ಲಿ ಸಹ ಕಾರ್ಯದರ್ಶಿ ಎನ್ ಎನ್ ಮಾಸಣಗಿ ದಾಖಲಿಸಿದರು.

ಭಾವಪೂರ್ಣ ಶ್ರದ್ದಾಂಜಲಿ

ಶಿಕ್ಷಕರ ಸಹಕಾರಿ ಬಳಗದ ಹಿರಿಯ ಸದಸ್ಯರು ವಯೋ ಸಹಜ ಮರಣ ಹೊಂದಿರುವ ವಿ ಎಸ್ ಇಚ್ಚಂಗಿಮಠ, ಎನ್ ಟಿ ಕಮತದ, ಎಸ್ ವಿ ಬೋಳಕಟ್ಟಿ ಶಿಕ್ಷಕರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯವನ್ನು ಎಮ್ ಎಸ್ ಅಕ್ಕಿ ನಿರ್ವಹಿಸಿದರು.

ಸನ್ಮಾನ

ವಯೋಸಹಜ ನಿವೃತ್ತಿ ಹೊಂದಿದ ಬಳಗದ ಸದಸ್ಯರಾದ ಎ ಜಿ ಹಿರೇಮಠ ಇವರನ್ನು ಗೌರವಿಸಲಾಯಿತು.

75 ವಸಂತ ಪೂರೈಸಿದ ಹಿರಿಯ ಚೇತನಕ್ಕೆ ಗೌರವ

ಬಳಗದ ಹಿರಿಯ ಸದಸ್ಯರು ಹಾಗೂ ಶಿಕ್ಷಕರ ಬಳಗದ ಅಧ್ಯಕ್ಷರಾದ ಬಿ ಕೆ ತಾಯಮ್ಮನವರ ಇವರನ್ನು ತಮ್ಮ ಜೀವಿತಾವಧಿಯ 75 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಎನ್ ಡಿ ಶ್ಯಾಬನವರ ನಡೆಸಿಕೊಟ್ಟರು.

ವಾರ್ಷಿಕ ವರದಿ ವಾಚನ

2020-21 ರ ವಾರ್ಷಿಕ ವರದಿಯನ್ನು ಬಳಗದ ಸಹ ಕಾರ್ಯದರ್ಶಿ ಎನ್ ಎನ್ ಮಾಸಣಗಿ ದಾಖಲಿಸಿದರು.

ವಾರ್ಷಿಕ ಲೆಕ್ಕ ಪರಿಶೋಧನಾ ವರದಿ

2020-21 ರ ವಾರ್ಷಿಕ ಲೆಕ್ಕ ಪರಿಶೋಧನೆ ನಡೆಸಿದ ಜಿ ಎಸ್ ಗುಂಜಳ, ಸಿ ಎಸ್ ಬಡಿಗೇರ, ಪಿ ಜಿ ಆರಾಧ್ಯಮಠ ತಂಡವು ಬಳಗದ ವಾರ್ಷಿಕ ಲೆಕ್ಕ ಪತ್ರಗಳನ್ನು ಪರಿಶೀಲನೆ ನಡೆಸಿ ಬಳಗದ ಕಾರ್ಯ ವೈಖರಿಯನ್ನು ನೋಡಿ *A* ವರ್ಗವನ್ನು ನೀಡಿದೆ ಎಂದು ಪರಿಶೀಲನೆ ನಡೆಸಿದ ತಂಡದ ಸದಸ್ಯರಾದ ಜಿ ಎಸ್ ಗುಂಜಳ ಅವರು ನೀಡಿದರು.

ಸಭೆಯಲ್ಲಿ ಚರ್ಚಿಸಿದ ವಿಷಯಗಳು

ವಾರ್ಷಿಕ ಲೆಕ್ಕ ಪತ್ರದ ಮೇಲೆ ಚರ್ಚೆ

2020-21 ರ ವಾರ್ಷಿಕ ಜಮಾ ಖರ್ಚು ಮಾಡಿದ ಕುರಿತು ಚರ್ಚೆಯನ್ನು ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಡಿ ಅರಳಿ ಹಳ್ಳಿಯವರು ನಡೆಕೊಟ್ಟರು. ಹಿಂದಿನ ನಿಯಮಾವಳಿಗಳನ್ನು ಮುಂದುವರೆಸಿಕೊಂಡು ಹೋಗುವ ನಿರ್ಧಾರವನ್ನು ಬಳಗದ ಸದಸ್ಯರು ಕೈಗೊಂಡರು.

ಮರಣೋತ್ತರ ಸಹಾಯ ಧನ

ಬಳಗದ ಸದಸ್ಯರು ತಮ್ಮ ಅಂತ್ಯಕಾಲವನ್ನು ತಲುಪಿದಾಗ ಅವರ ಮರಣೋತ್ತರ ಕಾಲದಲ್ಲಿ ಸಹಾಯವಾಗುವ ರೀತಿಯಲ್ಲಿ 5000 ರೂಪಾಯಿ ನೀಡಬೇಕೆಂದು ಶಿಫಾರಸು ಮಾಡಿತು.

2021-22 ರ ಪ್ರತಿಭಾ ಪುರಸ್ಕಾರಗಳು

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮುಂಬರುವ ವರ್ಷಗಳಲ್ಲಿ ಹತ್ತನೇಯ ತರಗತಿಯಲ್ಲಿ ಪ್ರತಿಶತ 90% ಹಾಗೂ ದ್ವಿತೀಯ ಪಿಯುಸಿ ಹಂತದಲ್ಲಿ 85% ಕ್ಕಿಂತ ಹೆಚ್ಚು ಪ್ರತಿಶತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವಾಗಿ 5000 ರೂಪಾಯಿ ನೀಡುವುದಾಗಿ ತೀರ್ಮಾನ ಮಾಡಿದರು.

RELATED ARTICLES

Most Popular

error: Content is protected !!
Join WhatsApp Group