ಕವನ: ದಿಟ್ಟ ಮಾತೆಗೆ ನುಡಿ ನಮನ

Must Read

ದಿಟ್ಟ ಮಾತೆಗೆ ನುಡಿ ನಮನ

ಕಮಲಾಬಾಯಿ ಚಟ್ಟೋಪಾಧ್ಯಾಯ
ಎಂದೂ ಮರೆಯದ ಶ್ರೇಷ್ಠ ಧ್ಯೇಯ
ಸ್ವಾತಂತ್ರ್ಯದ ಆ ಚಳವಳಿಯಲ್ಲಿ
ಭಾಗವಹಿಸಿದವರು ನಿರಂತರ ಸಕ್ರಿಯ

ಪತಿ ಜೊತೆ ಉಪ್ಪಿನ ಸತ್ಯಾಗ್ರಹ
ಮೂಲೆ ಗುಂಪಾಗದೆ ಮುನ್ನುಗ್ಗುತ
ಯುದ್ದ ನಿರಾಶ್ರಿತರ ಪುನರ್ವಸತಿಗೆ
ಶ್ರಮಿಸಿದ ದಿಟ್ಟೆ ಹೆಮ್ಮೆಯು ನಮಗೆ

ಕರಕುಶಲ ಕರ್ಮಿಗಳ ಸಹಾಯಕೆ ನಿಂತು
ಸಂಘ ಸಂಸ್ಥೆಗಳ ಹುಟ್ಟು ಹಾಕಿದರಂದು
ಸಂಗೀತ ನಾಟಕ ಅಕಾಡೆಮಿಗಳ ತೆರೆದು
ಅಧ್ಯಕ್ಷರಾದ ಹೆಗ್ಗಳಿಕೆ ಪಡೆದಿದ್ದರು ಅಂದು

ಕನ್ನಡದ ಮೊದಲ ಚಲನ ಚಿತ್ರ ನಾಯಕಿ
ಮೃಚ್ಛಕಟಿಕ ಈ ಸ್ತಬ್ಧ ಚಿತ್ರದಿ ನಟಿಸಿ
ಹೆಣ್ಕುಲಕೆ ಮಾದರಿ ಆಗಿರುವರು ಈಕೆ
ಹೆಸರು ತಂದು ಕೊಟ್ಟರು ಭಾರತ ದೇಶಕೆ

ಬನ್ನಿರಿ ದೇಶದ ಜನಗಳೆ ಎಲ್ಲರು
ಕಮಲಾದೇವಿಯ ಸ್ಮರಿಸೋಣ
ಅವರು ನಡೆದಂಥ ಉತ್ತಮ ಮಾರ್ಗದಿ
ನಡೆಯುತ ಸಾರ್ಥಕತೆ ಪಡೆಯೋಣ.


ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.

Latest News

ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?

೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ...

More Articles Like This

error: Content is protected !!
Join WhatsApp Group