ಕವನ: ದಿಟ್ಟ ಮಾತೆಗೆ ನುಡಿ ನಮನ

Must Read

ದಿಟ್ಟ ಮಾತೆಗೆ ನುಡಿ ನಮನ

ಕಮಲಾಬಾಯಿ ಚಟ್ಟೋಪಾಧ್ಯಾಯ
ಎಂದೂ ಮರೆಯದ ಶ್ರೇಷ್ಠ ಧ್ಯೇಯ
ಸ್ವಾತಂತ್ರ್ಯದ ಆ ಚಳವಳಿಯಲ್ಲಿ
ಭಾಗವಹಿಸಿದವರು ನಿರಂತರ ಸಕ್ರಿಯ

ಪತಿ ಜೊತೆ ಉಪ್ಪಿನ ಸತ್ಯಾಗ್ರಹ
ಮೂಲೆ ಗುಂಪಾಗದೆ ಮುನ್ನುಗ್ಗುತ
ಯುದ್ದ ನಿರಾಶ್ರಿತರ ಪುನರ್ವಸತಿಗೆ
ಶ್ರಮಿಸಿದ ದಿಟ್ಟೆ ಹೆಮ್ಮೆಯು ನಮಗೆ

ಕರಕುಶಲ ಕರ್ಮಿಗಳ ಸಹಾಯಕೆ ನಿಂತು
ಸಂಘ ಸಂಸ್ಥೆಗಳ ಹುಟ್ಟು ಹಾಕಿದರಂದು
ಸಂಗೀತ ನಾಟಕ ಅಕಾಡೆಮಿಗಳ ತೆರೆದು
ಅಧ್ಯಕ್ಷರಾದ ಹೆಗ್ಗಳಿಕೆ ಪಡೆದಿದ್ದರು ಅಂದು

ಕನ್ನಡದ ಮೊದಲ ಚಲನ ಚಿತ್ರ ನಾಯಕಿ
ಮೃಚ್ಛಕಟಿಕ ಈ ಸ್ತಬ್ಧ ಚಿತ್ರದಿ ನಟಿಸಿ
ಹೆಣ್ಕುಲಕೆ ಮಾದರಿ ಆಗಿರುವರು ಈಕೆ
ಹೆಸರು ತಂದು ಕೊಟ್ಟರು ಭಾರತ ದೇಶಕೆ

ಬನ್ನಿರಿ ದೇಶದ ಜನಗಳೆ ಎಲ್ಲರು
ಕಮಲಾದೇವಿಯ ಸ್ಮರಿಸೋಣ
ಅವರು ನಡೆದಂಥ ಉತ್ತಮ ಮಾರ್ಗದಿ
ನಡೆಯುತ ಸಾರ್ಥಕತೆ ಪಡೆಯೋಣ.


ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group