ಬೀದರ – ಗಡಿನಾಡು ಬೀದರ ಜಿಲ್ಲೆಯ ಸ್ವ ಕ್ಷೇತ್ರ ಔರಾದನಲ್ಲಿ ಲಸಿಕಾ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಿದರು. ಒಟ್ಟು 1,05,083 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಔರಾದ ಪಟ್ಟಣದ ಆದರ್ಶ ಶಾಲೆಯಲ್ಲಿ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಬೀದರ್ ಜಿಲ್ಲೆ ಸಂಪೂರ್ಣ ಕರೋನ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಿದ್ದು ಎಲ್ಲರೂ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ವಾರದೊಳಗೆ ಒಂದು ಲಕ್ಷ ಲಸಿಕೆ ಗುರಿಮುಟ್ಟುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಪೂರ್ಣಗೊಳಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಪಾಲಕರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಸುಮಾರು 1,05083 ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 900 ಸಿಬ್ಬಂದಿಗಳು,450 ತಂಡಗಳು, ಔರಾದ ತಾಲೂಕಿನಲ್ಲಿ 103 ತಂಡಗಳು ಹಾಗೂ 10 ರಿಜರ್ವ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳಿಗೆ ಕೊವ್ಯಾಕ್ಸಿನ್ ಮಾತ್ರ ಕೊಡಲಾಗುತ್ತಿದ್ದು ಸುಮಾರು ಔರಾದ ತಾಲೂಕಿನಲ್ಲೇ 12,000 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ// ವಿ.ಜಿ.ರೆಡ್ಡಿ ತಿಳಿಸಿದರು.
ಔರಾದ ತಹಶಿಲ್ದಾರ ಕುಲಕರ್ಣಿ,ಬಿಇಓ ಬಂಡೆಪ್ಪ ಕಂಟೆ,ಮುಖಂಡರಾದ ಪ್ರಕಾಶ್ ಅಲ್ಮಾಜೆ,ಶಿಕ್ಷಕರು,ಆರೋಗ್ಯ ಇಲಾಖೆ ವೈದ್ಯರು,ಆರೋಗ್ಯ ಕಾರ್ಯಕರ್ತೆಯರು
ಉಪಸ್ಥಿತರಿದ್ದರು.