ಕವನ: ಒಪ್ಪಿಕೊ ಕೃಷ್ಣ

Must Read

ಒಪ್ಪಿಕೊ ಕೃಷ್ಣ

ಮನೆ ಅಂಗಳದಿ
ಹೆಜ್ಜೆಗಳ ಹಾಕಿ
ಹೃದಯ ಮಂಟಪದಿ
ಬಾ ಎನ್ನುತ
ಸುದಾಮನ ಬೆಲ್ಲ ಅವಲಕ್ಕಿ
ತರತರದ ಉಂಡಿಗಳ
ಮೊಸರು ಕಡೆದು ತೆಗೆದ ಬೆಣ್ಣೆಯ
ಆಕಳ ನೊರೆ ಹಾಲು
ಮಾನಸ ಪೂಜೆಯ ಮಾಡಿ
ಅಪಿ೯ಸುತಿಹೆನು
ಒಪ್ಪಿಕೋ ಕೃಷ್ಣ

ಚಿನ್ನದ ತೊಟ್ಟಿಲ ಕಟ್ಟಿ
ನಿನ್ನ ಮಲಗಿಸಿ ಹಾಡಿ
ತೂಗುವೆನು
ಯಶೋದೆಯಾಗಿ
ಎನ್ನ ಹೃದಯ ಸಿಂಹಾಸನದಿ
ವಿರಾಜಮಾನ
ಆಗು ಬಾ ಕೃಷ್ಣ.

ರಾಧಾ ಶಾಮರಾವ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group