ಭಾರತೀಯ ಸೇನೆಯ ಕಾರ್ಯಾಚರಣೆ ಸಿಯಾಚಿನ್ ನಲ್ಲಿ…

Must Read

ನಮ್ಮ ಉಸಿರು ಉಳಿಸಿದೆ ಸೇನೆ

ಹಿಮದ ನಡುಗಡ್ಡೆಯಲ್ಲಿ
ಕೊರೆಯುವ ಚಳಿಯಲ್ಲಿ
ಭಾರತಾಂಬೆಯ ಮಕ್ಕಳು
ಶತ್ರುಗಳ ಸದೆ ಬಡಿಯುತ್ತಾ
ಪ್ರಾಣ ಲೆಕ್ಕಿಸದೆ ನಿಂತಿಹರು
ತಾಯ್ನಾಡಿನ ವೀರಯೋಧರು

ಒಂದೇ ಬಾರಿಗೆ
ಮೈಮೇಲೆ ಬಂದೆರೆಗುವ
ರಕ್ಕಸ ಹಿಮದ ರಾಶಿ
ಅಂಜದೇ – ಕುಗ್ಗದೆ
ಎದೆಯೊಬ್ಬಿಸಿ ನಿಂತಿಹರು
ತಾಯ್ನಾಡಿನ ವೀರಯೋಧರು

ಕ್ಷಣ ಕ್ಷಣವೂ ಬದಲಾಗುವ
ಸಿಯಾಚಿನ್ ಪ್ರಕೃತಿಯ
ಮಡಿಲಲ್ಲಿ ಜೀವದ ಹಂಗು
ತೊರೆದು ನಮ್ಮೆಲ್ಲರಿಗೂ
ಉಸಿರು ನೀಡಿ ನಿಂತಿಹರು
ತಾಯ್ನಾಡಿನ ವೀರಯೋಧರು

ದೇಶದ ಗಡಿಯಲ್ಲಿ
ಅವರ ಉಸಿರನು ಲೆಕ್ಕಿಸದೆ
ವೀರ ಮರಣವನ್ನು ಎದೆಗಪ್ಪಿ
ಭಾರತಾಂಬೆಯ ಸೇವೆ
ಸಲ್ಲಿಸುತ್ತಾ ನಿಂತಿಹರು
ತಾಯ್ನಾಡಿನ ವೀರಯೋಧರು

ನಮ್ಮ ಹೆಮ್ಮೆಯ ಯೋಧರಿಗೆ
ಒಂದು ಹೃದಯ ಪೂರ್ವಕ ಸಲಾಂ


ಅನಂತ ಕಲ್ಲಾಪುರ , ತೀರ್ಥಹಳ್ಳಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group