ಭಾರತೀಯ ಸೇನೆಯ ಕಾರ್ಯಾಚರಣೆ ಸಿಯಾಚಿನ್ ನಲ್ಲಿ…

Must Read

ನಮ್ಮ ಉಸಿರು ಉಳಿಸಿದೆ ಸೇನೆ

ಹಿಮದ ನಡುಗಡ್ಡೆಯಲ್ಲಿ
ಕೊರೆಯುವ ಚಳಿಯಲ್ಲಿ
ಭಾರತಾಂಬೆಯ ಮಕ್ಕಳು
ಶತ್ರುಗಳ ಸದೆ ಬಡಿಯುತ್ತಾ
ಪ್ರಾಣ ಲೆಕ್ಕಿಸದೆ ನಿಂತಿಹರು
ತಾಯ್ನಾಡಿನ ವೀರಯೋಧರು

ಒಂದೇ ಬಾರಿಗೆ
ಮೈಮೇಲೆ ಬಂದೆರೆಗುವ
ರಕ್ಕಸ ಹಿಮದ ರಾಶಿ
ಅಂಜದೇ – ಕುಗ್ಗದೆ
ಎದೆಯೊಬ್ಬಿಸಿ ನಿಂತಿಹರು
ತಾಯ್ನಾಡಿನ ವೀರಯೋಧರು

ಕ್ಷಣ ಕ್ಷಣವೂ ಬದಲಾಗುವ
ಸಿಯಾಚಿನ್ ಪ್ರಕೃತಿಯ
ಮಡಿಲಲ್ಲಿ ಜೀವದ ಹಂಗು
ತೊರೆದು ನಮ್ಮೆಲ್ಲರಿಗೂ
ಉಸಿರು ನೀಡಿ ನಿಂತಿಹರು
ತಾಯ್ನಾಡಿನ ವೀರಯೋಧರು

ದೇಶದ ಗಡಿಯಲ್ಲಿ
ಅವರ ಉಸಿರನು ಲೆಕ್ಕಿಸದೆ
ವೀರ ಮರಣವನ್ನು ಎದೆಗಪ್ಪಿ
ಭಾರತಾಂಬೆಯ ಸೇವೆ
ಸಲ್ಲಿಸುತ್ತಾ ನಿಂತಿಹರು
ತಾಯ್ನಾಡಿನ ವೀರಯೋಧರು

ನಮ್ಮ ಹೆಮ್ಮೆಯ ಯೋಧರಿಗೆ
ಒಂದು ಹೃದಯ ಪೂರ್ವಕ ಸಲಾಂ


ಅನಂತ ಕಲ್ಲಾಪುರ , ತೀರ್ಥಹಳ್ಳಿ

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group