ಕವನ: ಕನ್ನಡಕಾಗಿ ಹೋರಾಡು…

Must Read

ಕನ್ನಡಕಾಗಿ ಹೋರಾಡು

ಕನ್ನಡ ಭಾಷೆಯ ಮಾತಾಡು,
ಕನ್ನಡದಲೇ ಉಸಿರಾಡು,
ಕನ್ನಡ ತಾಯಿಗೆ ಪ್ರಾಣ ನೀಡು..

ಪಂಪ,ರನ್ನ,ರಾಘವಾಂಕ,ಹರಿಹರ,
ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು,
ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ,
ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು……

ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ,
ಶರಾವತಿ ನಾಡ ಕಾಮಧೇನುಗಳು,
ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ,
ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು…..

ಹಂಪೆ,ಬಾದಾಮಿ-ಐಹೊಳೆ,
ಮೇಲುಕೋಟೆ,
ಬೇಲೂರು-ಹಳೇಬೀಡು,
ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು,
ರಾಜ್,ವಿಷ್ಣು,ಅಂಬಿ,ಅನಂತ್ ನಾಗ್,ಅಶ್ವತ್ಥ್
ಕನ್ನಡನಾಡಿನ ನಟನಾ ರತ್ನಗಳು….

ಕನ್ನಡನಾಡಲಿ ಎಲ್ಲವೂ ತುಂಬಿವೆ,
ಚಿಂತೆಯೇತಕೆ ಓ ಕನ್ನಡಿಗ,
ಕನ್ನಡಕಾಗಿ ಹೋರಾಡು,ಕನ್ನಡತನವ ಕಾಪಾಡು…

ಕನ್ನಡವೇ ನಿನ್ನಮ್ಮ,ನಿನ್ನ ಪೊರೆವ ದೇವರು,
ಕನ್ನಡಕಾಗಿ ಕೈಎತ್ತು,ಕನ್ನಡ ಬಾವುಟ ಮೇಲೆತ್ತು,
ಕನ್ನಡ ..ಕನ್ನಡ..ಸವಿಗನ್ನಡ ,ಸಿಹಿ ಕನ್ನಡ ನಿನ್ನ ಉಸಿರಾಗಲಿ,
ಕರುನಾಡಲಿ ನಿನ್ನ ಜನ್ಮ ಸಾರ್ಥಕವಾಗಲಿ…

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group