ಜೈನಧರ್ಮದ ವಿಶೇಷ ದಶಲಕ್ಷಣಪರ್ವ. 4ನೇ ದಿನ.

Must Read

ಉತ್ತಮ ಶೌಚ ಧರ್ಮ (purity )

ಸುಖವು ವಸ್ತುವಿನಲ್ಲಿ ಇಲ್ಲ, ಅದು ಮಾನವನ ಮನದಲ್ಲಿದೆ, ಆತ್ಮದಲ್ಲಿದೆ. ವಸ್ತುವಿನ ಸುಖ ಭೋಗಕ್ಕೆ ಮಾತ್ರ. ಭೋಗ ಕ್ಷಣಿಕ ಸುಖ ನೀಡುತ್ತದೆ ಆದರೆ ಆತ್ಮಸುಖ ಮಾತ್ರ ಶಾಶ್ವತ ಸುಖ ನೀಡುತ್ತದೆ. ಆದ್ದರಿಂದ ಜಿನೇಂದ್ರ ಭಗವಂತನ ಧ್ಯಾನ,ಅವನಲ್ಲಿ ಲೀನನಾಗುವದು ಮಾತ್ರ ಉತ್ತಮ ಸುಖ ನೀಡಲು ಸಾಧ್ಯ.
ಅಂತರಾತ್ಮನಲ್ಲಿ ಒಡಮೂಡುವ ಲೌಕಿಕ ಸುಖವೇ ನಿಜವಾದ ಸುಖ. ವಸ್ತು,ಆಸ್ತಿ ಬೆನ್ನುಹತ್ತಿ ನಿಜ ಪ್ರವೃತ್ತಿಯಿಂದ ಗಳಿಸಿದ್ಡು ಕೇವಲ ಭೋಗಸುಖ ಅದರ ಅನುಭವವು ಕ್ಷಣಿಕ.

ಶೌಚ ಎಂದರೆ ಶರೀರ ಮತ್ತು ಆತ್ಮನನ್ನು ನಿರ್ಮಲ ಮತ್ತು ಪವಿತ್ರವಾಗಿ ಇಟ್ಟುಕೊಳ್ಳವುದು. ಅನ್ಯಾಯದ ಸಂಪಾದನೆ ಪರಸ್ತ್ರೀಯ ಬಗ್ಗೆ ಮನಸ್ಸಿನೊಳಗೆ ಅನುರಾಗವನ್ನು ಇಡಕೂಡದು. ಅಭಕ್ಷ್ಯ ಆಹಾರವನ್ನು ಮಾಡಬಾರದು ಮತ್ತು ಸೇವಿಸಬಾರದು. ಭಗವಂತನ ಸ್ವರೂಪವನ್ನು ಪ್ರತಿನಿತ್ಯ ಪ್ರತಿಕ್ಷಣ ಧ್ಯಾನಿಸುತ್ತಾ ಇರಬೇಕು. ಅಹಿಂಸೆ ಸತ್ಯ,ಅಚೌರ್ಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಈ ಐದು ಮಹಾವ್ರತಗಳಿಂದ ನಿಜವಾದ ಶೌಚ ಧರ್ಮ ಏರ್ಪಡುತ್ತದೆ.

ಅಭ್ರರಹಿತ ವ್ಯೂಮ ಶೌಚ ಧರ್ಮ
ಶೌಚದಲ್ಲಿ ಪರಿಗ್ರಹ ವಿಷದ ಹೋಮ ಶೌಚಧರ್ಮದಲಿ ಸುಕುಮಾರ ನಾಮ
ಶೌಚದಿ ಇದೆ ಕಷಾಯ ತ್ಯಾಗವು
ಹೀಗೆ ಅಂತರ್ ಪವಿತ್ರತೆಯೆ ಶೌಚಧರ್ಮವಾಗಿದೆ. ಅತಿಯಾಸೆ, ಜಿಪುಣತನ ಬಿಟ್ಟು ಉದಾರಿಗಳಾಗಿ ದಾನ ಧರ್ಮ ಮಾಡಿ ಜೀವಿಸುವುದೆ ಶೌಚ ಧರ್ಮವಾಗಿದೆ. ಉತ್ತಮ ಶೌಚ ಧರ್ಮ ಶುದ್ಧಜಲದ ಸ್ನಾನ , ನಿರ್ಮಲ ವಸ್ತ್ರಧಾರಣೆ ಪರಮಾತ್ಮ ಚಿಂತನೆ ಪಂಚಣಮೋಕಾರ ಮಂತ್ರ ಜಪ ಮನದ ಕಲುಷಿತ ಭಾವ ತೊರೆದು, ಜೀವದಯೆ ಹೊಂದಿ ಅಶುಚಿ ಕರ್ಮ ಹಿಂಸೆ ತ್ಯಜಿಸಿ, ಪಂಚೇಂದ್ರಿಯ ನಿಗ್ರಹಿಸಿ , ರಾತ್ರಿ ಭೋಜನ , ಕಂದ ಮೂಲ , ಗಡ್ದೆ ಗೆಣಸು ತ್ಯಾಗ ವ್ರತಧರಿಸಿ, ಶೌಚಧರ್ಮ ಪಾಲಿಸಿ.
ಓಂ ಹ್ರೀಂ ಶೌಚಧರ್ಮಾಂಗಾಯ ನಮ:
ಜಲಗಂಧಾದಿ ನಿರುಮಪಾತಿ ಸ್ವಾಹಾ.

ಉತ್ತಮ ಸತ್ಯ

ಮಾತು ಅವಶ್ಯವಿದ್ದರೆ ಮಾತನಾಡು ಇಲ್ಲದಿದ್ದರೆ ಸುಮ್ಮನಿದ್ದುಬಿಡು , ಮಾತು ಕಡಿಮೆ ಇರಲಿ ಸತ್ಯವಿರಲಿ. ಅತಿ ಮಾತು ಮನಸ್ಸಿನ ಶಾಂತತೆ ಕೆಡಿಸುತ್ತದೆ. ಸುಳ್ಳು ನುಡಿಯುವವ ಸದಾ ಅಂಜಿಕೆಯಲ್ಲಿಯೇ ಬದುಕಬೇಕು. ಒಂದು ಸುಳ್ಳು ಸಾಧಿಸಲು ನೂರು ಸುಳ್ಳು ಹೇಳಬೇಕು. ಅದರಿಂದ ಪಾಪಕರ್ಮದ ಪ್ರಭಾವವಾಗಿ ಮನುಷ್ಯ ಅವನತಿಗಿಡಾಗುತ್ತಾನೆ.

ಸತ್ಯವು ಸತ್ ಎನ್ನುವ ಪದದಿಂದ ಬಂದಿದೆ. ಸತ್ ಎಂದರೆ ಮುರಿಯಲಾರದ, ಅಂತ್ಯವಿಲ್ಲದ್ದು ಎಂದು. ಆದ್ದರಿಂದ ಸತ್ಯವನ್ನು ಪಾಲಿಸಿ ಅಖಂಡ ಸುಖವನ್ನು ಪಡೆಯಿರಿ ಎಂದು ಅರ್ಥನೀಡುತ್ತದೆ.

ಉತ್ತಮ ಸತ್ಯವು ವಿಶ್ವಾಸ ವೃದ್ದಿಸುವದು. ಜನರ ಪ್ರೀತಿ ಗಳಿಸುವಂತದು. ಸ್ವಾದ್ಯಾದ ತತ್ವದಿಂದ ಮೋಕ್ಷ ಮಾರ್ಗದ ದರ್ಶನವಾಗುತ್ತದೆ. ಸತ್ಯವೇ ಜಿನವಾಣಿಯ ಸೂತ್ರವಾಗಿದೆ.

ಸತ್ಯವಂತರನ್ನು ಎಲ್ಲರೂ ಗೌರವಿಸುವರು. ಶರೀರ ಮನಸ್ಸಿನ ಸ್ವಾಸ್ಥ್ಯದ ಮೂಲವೆ ಸತ್ಯ.

ಸತ್ಯವಚನದಿಂದ ಪರಮಮೋಕ್ಷ, ತ್ರಿಭುವನ ಕೀರ್ತಿ ಲಭಿಸುತ್ತದೆ.

ಸತ್ಯವು ಸುಂದರವಾಗಿದೆ. ಕಂಠಹಾರವಾಗಿದೆ. ಜಯಕಾರದ ಮೂಲವಾಗಿದೆ. ಪರೋಪಕಾರಿ ಸಜ್ಜನ ಹಿತಕಾರಿ, ಸತ್ಯ ಜಿನಾಮೃತ ಪಾವನ ಹಿತಕಾರಿ ತುಡುಗು ಭಯ ನಿವಾರಿ,ನಿಂದಾಹಾರಿ, ಜೀವದಯ ಚಿತ್ತಗುಣಕಾರಿ ,ಕ್ರೋಧ ಕಷಾಯದಿಂದ ವಿಮುಕ್ತಿ,ಸ್ವರ್ಗದ ದಾರಿ, ಪ್ರಸಿದ್ದಿ, ಕರ್ಮಕಲಂಕ ದೂರಮಾಡುವಂಥದ್ದು ಸತ್ಯ ಸುರನರಾದಿ ಪೂಜಿಸುವ ದಿವ್ಯಮಂತ್ರವಾಗಿದೆ.
ಅಮೃತ ಸಮಾನರಸ ಸತ್ಯ
ಧರ್ಮರಾಜನ ಕೀರ್ತಿ ಸತ್ಯ
ಹರಿಶ್ಚಂದ್ರನ ಸತ್ಯಕೆ ರಾಜಧಾನ ಸತ್ಯ ಧರ್ಮದಿ ಸಿಗುವುದು
ಅಗಣಿತ ಫಲನುದಾನ

ಓಂ ಹೃಂ ಸತ್ಯಧರ್ಮಾಂಗಾಯ ನಮ:
ಜಲಗಂಧಾದಿ ಅರ್ಘ್ಯ ನಿರೂಪಾಮಿತಿ ಸ್ವಾಹಾ.

ಲಲಿತಾ ಮ ಕ್ಯಾಸನ್ನವರ
ರಾಜ್ಯ ಪುರಸ್ಕೃತ ಶಿಕ್ಷಕಿ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group