ಮುನವಳ್ಳಿಃ “ಹನುಮಂತನನ್ನು ಪೂಜಿಸುವುದರಿಂದ ಭಕ್ತರು ತಮ್ಮ ಭಯ ಮತ್ತು ವೈಫಲ್ಯಗಳಿಂದ ದೂರವಾಗುತ್ತಾರೆ. ಹನುಮಂತನ ಅನುಗ್ರಹದಿಂದ ಧನಾತ್ಮಕತೆ ಧೈರ್ಯ ಶಕ್ತಿ ವೃದ್ಧಿಸುತ್ತದೆ. ಹನುಮಂತನಿಂದ ನಾವು ತಾಳ್ಮೆ ಗುಣವನ್ನು ಹೊಂದಬಹುದು ನಮ್ಮ ದಾರಿಯಲ್ಲಿ ಬರುವ ಎಲ್ಲಾ ತೊಂದರೆಗಳು ಮತ್ತು ಅಡತಡೆಗಳನ್ನು ಜಯಿಸುವುದನ್ನು ಹನುಮಂತನ ಚರಿತ್ರೆ ಓದುವ ಮೂಲಕ ಅವನು ಹೇಗೆ ಸಕಲ ಸಂಕಷ್ಟಗಳನ್ನು ಜಯಿಸಿದನು ಎಂಬುದನ್ನು ನಾವು ಕಲಿಯಬಹುದು”ಎಂದು ಮುನವಳ್ಳಿ ಸಮೀಪದ ಸಿಂದೋಗಿ ಮಾರುತಿ ಬಡಾವಣೆಯ ಹನುಮಾನ ಮಂದಿರದ ಅರ್ಚಕರಾದ ಶಾಮರಾವ್ ಕುಲಕರ್ಣಿ ತಿಳಿಸಿದರು.
ಅವರು ಸಿಂದೋಗಿ ಮಾರುತಿ ಬಡಾವಣೆಯಲ್ಲಿ ಜರುಗಿದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸ ಪಠಿಸುವ ಮೂಲಕ ಸಕಲ ಸದ್ಭಕ್ತರಿಗೆ ಹನುಮ ಜಯಂತಿಯ ಮಹತ್ವವನ್ನು ತಿಳಿಸಿದರು.
ಬೆಳಿಗ್ಗೆ ೫ ಗಂಟೆಗೆ ಹನುಮಂತ ದೇವರಿಗೆ ರಾಜಶೇಖರ ಖಾನಾಪುರೆ ಕುಟುಂಬದವರು ಹಮ್ಮಿಕೊಂಡಿದ್ದ ವಿಶೇಷ ಪೂಜೆ ಅಲಂಕಾರ ಕಾರ್ಯವನ್ನು ಶ್ಯಾಮರಾವ್ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನೆರವೇರಿಸಿದರು.
ನಂತರ ಹನುಮಂತನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಮಹಿಳೆಯರು ನಾಮಕರಣದಲ್ಲಿ ಪಾಲ್ಗೊಂಡರು. ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯ ಜರುಗಿತು. ಇದರ ನೇತೃತ್ವವನ್ನು ಶರಣೆ ಶಿವಬಸಮ್ಮ ಜಂತಲಿ. ಮಹಾದೇವಿ. ಗಂಗಮ್ಮ ಕಡಕೋಳ, ರತ್ನಾ ವಿರುಪಯ್ಯನವರಮಠ. ಶಿವಲೀಲಾ ಕಡಕೋಳ, ಅನ್ನಪೂರ್ಣ ಪೂಜೇರ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾಧರ ಉಜ್ಜಿನಕೊಪ್ಪ. ರಾಮನಗೌಡ ಪಾಟೀಲ, ಶುಭದಾ ಮಹಾಜನೆ. ಶೋಭಾ ಕದಂ ಪ್ರೇಮಾ ಗುಂಡ್ಲೂರ.ಲಲಿತಾ ನಿಕ್ಕಂ..ಮಂಜುಳಾ ಗೋಡಿ.ಅಕ್ಷತಾ ಕದಂ.ಅಶ್ವಿನಿ ಕದಂ.ಶಂಕರವ್ವ ಹೊನ್ನಳ್ಳಿ. ರಾಧಾ ಗುದಗಾಪುರ. ಸೇರಿದಂತೆ ಮಾರುತಿ ಬಡಾವಣೆ ಸಿಂದೋಗಿ ಮುನವಳ್ಳಿಯ ಸಕಲ ಸದ್ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನೆರೆದ ಎಲ್ಲ ಭಕ್ತಜನರಿಗೆ ಕೋಸಂಬರಿ ಮತ್ತು ಪಾನಕವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು