ಕವನ: ಆಷಾಢದ ಆಲಾಪ

Must Read

ಆಷಾಢದ ಆಲಾಪ

ಆಷಾಢದ ಆಲಾಪ ಹೊರಗೆ ಮಳೆ
ಒಳಗೆ ವಿರಹ ವೇದನೆ
ಇನಿಯಳಿರದ ಭಣಗುಡುವ ಮನೆ
ಅತ್ತೆ ಸೊಸೆ ಮುಖ ನೋಡುವಂತಿಲ್ಲದ ಕಟ್ಟಪ್ಪಣೆ

ಆಷಾಢದ ಚಿತ್ರ ಹಿಂಸೆ ನವದಂಪತಿಗೆ
ದೂರವಾಗಿಹ ದೇಹ ಮತ್ತೆ ಮಿಲನದ ಧಗೆ
ತವರು ಮನೆಯಲಿಹ ಇನಿಯಳ ನೆನಪು
ಇನಿಯನಿಗೆ ಶೂನ್ಯ ಮಾಸವೀ ಆಷಾಢ

ಅಗಲಿಕೆಯ ಕಹಿ ನೆನಪದು ಮತ್ತೆ ಮತ್ತೆ
ಸಾವಿನ ನಾದ ನುಡಿಸುತಿಹ ಶಹನಾಯಿ
ಕಿವಿಗಪ್ಪಳಿಸುತಿಹ ವಿರಹದ ನಾದ
ಕಿಚ್ಚು ಹಚ್ಚುತಿಹ ನಲ್ಲೆಯ ನೆನಪು

ನೋವು ನಲಿವುಗಳ ಹಂಚಿಕೊಳ್ಳುವ ಮನಗಳು
ಆಷಾಢದ ಹೆಸರಲಿ ದೂರವಾಗಿಹ ದಿನಗಳು
ಕಳೆದ ದಿನಗಳ ನೆನಪಿಸುತ ವಿರಹ
ಸಂಸ್ಕೃತಿಯ ಹೆಸರಲಿ ದಿನಗಳೆಸುತಿಹ ಮನಗಳು

ಮನೆಯಾಚೆ ಹೊರಟ
ಇನಿಯ ಮರಳಿದಾಗ
ಬರಿಯ ಬಾಗಿಲ ಹಿಂತಿರುಗಿದ ನೋಟ
ಇನಿಯಳ ಸುಳಿವಿರದ ಬಾಗಿಲಲಿ ಶೂನ್ಯತೆ
ಕಳೆದ ದಿನಗಳ ನೆನಪಿಸುತ ಹೊರ ನಡೆವ ವಿರಹ

ಹನಿಮೂನಿಗೂ ಕೊಡದು ಅವಕಾಶ
ಮಿಲನವಾದರೆ ಮಗುವಿನ ಜನನ ಬೇಸಿಗೆಯಲಿ
ಎನುತ ದೂರವಿಡುವ ಸಂಪ್ರದಾಯ

ಪತಿ ಪತ್ನಿಯರ ಅಗಲಿಸಿದ ಕಹಿ ಕಷಾಯ ನೀಡಿದ ಆಷಾಢ
ಬೇಗ ಬಾ ಶ್ರಾವಣವೇ
ಹಬ್ಬಗಳ ಸಾಲು ನೆನಪನು ಮರುಕಳಿಸುತ ಬಾ ಭುವಿಗೆ ಮತ್ತೆ ನೀಡು ಜೀವಕಳೆ
ನಲ್ಲ ನಲ್ಲೆಗೆ
ವಿರಹದುರಿಯ ದೂರವಿರಿಸುತ


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭
೮೯೭೧೧೧೭೪೪೨ ೭೯೭೫೫೪೭೨೯೮

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group