ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

Must Read

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ ಮೂಲಕ ಜಾಗೃತಿ ಮೂಡಿಸುವ ವಾಹನಕ್ಕೆ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ  ಸುಭಾಷ್ ಸಂಪಗಾವಿ ಹಾಗೂ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಪಿ. ಎಮ್. ರಘು ರವರು ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಆವರಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅನುಷ್ಠಾನ ಬೆಂಬಲ ಸಂಪನ್ಮೂಲ ಸಂಸ್ಥೆ ಗ್ರಾಮೋದಯ ಬೈಲಹೊಂಗಲ ಇವರ ಸಹಯೋಗದಲ್ಲಿ ಚಾಲನೆ ನೀಡಲಾಯಿತು.

ಜಲಜೀವನ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ನೀರು ಮತ್ತು ನೈರ್ಮಲ್ಯ ಕುರಿತು ಹಾಗೂ ನೀರಿನ ಸಂರಕ್ಷಣೆ, ಸಮುದಾಯವಂತಿಕೆ ಸಂಗ್ರಹಣೆ, ಬೂದು ನೀರು ನಿರ್ವಹಣೆ, ಮಳೆ ನೀರು ಕೊಯ್ಲು ನಿರ್ವಹಣೆ ಬಗ್ಗೆ ಪ್ರತಿ ಗ್ರಾಮದಲ್ಲಿ ಆಟೋ ಪ್ರಚಾರ ವಾಹನದ ಮೂಲಕ ಜಾಗೃತಿ ಮೂಡಿಸಲಾಗುವುದು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಅಧಿಕಾರಿಗಳಾದ ಎಂ ಎ ಇಂಚಲಮಠ, ಬಿ ಬಿ ಮುನವಳ್ಳಿ, ನಾಗಪ್ಪ ಕೋಲ್ಕಾರ ಹಾಗೂ ಗ್ರಾಮೋದಯ ಬೈಲಹೊಂಗಲ ಸಂಸ್ಥೆಯ ಯೋಜನಾ ಸಂಯೋಜಕರು ಶ್ರೀ ಬಸವಂತ ಬಿ ಜಂತಿ ಉಪಸ್ಥಿತರಿದ್ದರು.

Latest News

ಸಚಿವ ತಿಮ್ಮಾಪುರರಿಗೆ ನೈತಿಕ ಬೆಂಬಲ ; ಮುಗಳಖೋಡದಲ್ಲಿ. ದಿ.6 ರಂದು ಕಲಾವಿದರ ಸಭೆ 

ಮುಧೋಳ  - ಮುಧೋಳದ ಮೀಸಲು ಮತಕ್ಷೇತ್ರದಲ್ಲಿ ಸೋಲು ಗೆಲುವುಗಳನ್ನ ಸ್ವೀಕರಿಸುತ್ತಾ ಸಾಮಾಜಿಕವಾಗಿ ಏರಿಳಿತಗಳನ್ನು ಅನುಭವಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಾ ಬಂದಿರುವ...

More Articles Like This

error: Content is protected !!
Join WhatsApp Group