ವಿಶ್ವ ಆಹಾರ ದಿನದ ಶುಭಾಶಯಗಳು

Must Read

ಅನ್ನ ಬಿಟ್ಟೆ ನೀ ಸತ್ತೆ

ತುತ್ತು ಅನ್ನ ಬೊಗಸೇ ನೀರು ಕೊಟ್ಟ ಮಾಡಿದ ಫಲದಿಂದ
ಕಷ್ಟ ನಷ್ಟ ದಲ್ಲೋ ಅನ್ನವನ್ನು ಇತ್ತ ಆ ಪರಬ್ರಹ್ಮ
ಮಾಡಿದ ಕರ್ಮಾನುಸಾರ ಪಡೆಯುವುದು ಅನ್ನದ ಬಂಧ
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಸಕಲ ಜೀವ ರಾಶಿ ಗಳ ಮೇಲೆ ಅವನ ಕಣ್ಣು
ಮನಸಿನನುಸಾರ ಸ್ವರ್ಗ-ನರಕ ಬಳಿಯುವನು ಬಣ್ಣ
ಅನ್ನ ಎಲ್ಲಾ ಪೀಳಿಗೆಗೂ ಬೇಕು ಕಾಯ್ದುಕೋ ಅಣ್ಣ
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಅನ್ನಯಾರ ಸ್ವತ್ತಲ್ಲ,ಕೆಡಿಸುವ ಹಕ್ಕಿಲ್ಲ
ದುಡಿದು ತಿಂದಂತೆ ಮೈಯ್ಯ ತುಂಬಾ ಶಕ್ತಿ
ಭೇದವಿಲ್ಲ, ಸಾಯೋವರೆಗೂ ಅನ್ನದ ಮೇಲೆ ನಿನ್ನ ಹೆಸರು
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಕರೆದಾಯ್ತು ಎಂದರೆ,ಹೋಗಲೇಬೇಕು ಎಲ್ಲವ ಬಿಟ್ಟು
ಇದ್ದಾಗ ಶ್ರೀಮಂತಗೊಳಿಸು ಅನ್ನದಿಂದ ಈ ಹೊಟ್ಟೆಯ
ಹೃದಯವೇ ಪರಬ್ರಹ್ಮ , ಬಳಸಿಕೋ ಆ ದೇವರ.
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||

ಬಿ.ಎನ್. ಹೂಗಾರ್

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group