ಸರಳ..ಸುಂದರ ದಸರಾ ವಿಶ್ವಕ್ಕೇ ಮಾದರಿ…..

Must Read

ಚಾಮುಂಡೇಶ್ವರಿಗೆ ಅರ್ಚನೆ ಮಾಡಿ,

ಸ್ವಾರ್ಥಕಾಗಿ ಏನನೂ ಕೇಳಲಿಲ್ಲ,
ನನ್ನ ಕೋರಿಕೆ ಕೇವಲ ಮೂರು..
ಕರೋನಾದಿಂದ ಜನತೆಯ ರಕ್ಷಿಸು..
ಕರೋನಾ ಲಸಿಕೆಗೆ ದಾರಿ ತೋರು..
ಕನ್ನಡ ನಾಡಿನ ಜನರ ಪ್ರವಾಹದಿಂದ ರಕ್ಷಿಸು…
ಎಂತಹ ವ್ಯಕ್ತಿತ್ವ; ನಿಸ್ವಾರ್ಥ ಪ್ರಾರ್ಥನೆ
ವಿಶ್ವಕೇ ಮಾದರಿಯಾದರು..
ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥರು….

ಅಂದು ವಿಜಯನಗರದ ಅರಸರು
ಆರಂಭಿಸಿದರು ದಸರಾ ಉತ್ಸವವ
ಶತ್ರುಗಳ ಮೇಲಿನ ದಿಗ್ವಿಜಯದ ಸಂಕೇತವಾಗಿ,
ಭಕ್ತಿ-ಶಕ್ತಿ-ಶೌರ್ಯಗಳ ಪ್ರತೀಕ ವಾಗಿತ್ತು ಅಂದಿನ ದಸರಾ….

ಮೈಸೂರು ಅರಸರು ಆರಂಭಿಸಿದರು,
ಸಂಸೃತಿಯ ಪೋಷಿಸಲು ಮೈಸೂರು ದಸರಾ,
ಆಟೋಟ,ಕ್ರೀಡಾ ಕೂಟ,ಕುಸ್ತಿ
ಸಾಹಿತ್ಯ, ಸಂಗೀತ, ಸಂಸ್ಕೃತಿ ಗಳ ಬೀಡಾಯಿತು
ಅಂದಿನ ಮೈಸೂರು ದಸರಾ…
ಜಾತ್ಯತೀತ ಚಿಂತನೆಯ,ಧಾರ್ಮಿಕ ಶ್ರದ್ಧೆ ಯ
ಕೇಂದ್ರವಾಗಿತ್ತು ಅಂದಿನ ದಸರಾ…..

ದಸರಾ ಕಣ್ತುಂಬಿಕೊಳ್ಳಲು ಜನರ ಪ್ರವಾಹ,
ವಿಶ್ವದ ಮೂಲೆಮೂಲೆಗಳಿಂದ ಜನಸಾಗರ,
ರಾತ್ರಿ ಬೆಳಕಿನ ದಸರಾ,ಆಹಾರಮೇಳ,
ಸಂಗೀತ-ಸಾಹಿತ್ಯ ಮೇಳ,ವಸ್ತುಪ್ರದರ್ಶನ,
ಫಲಪುಷ್ಪ ಮೇಳ ತಂದಿತ್ತು ದಸರೆಗೆ ರಂಗು…..

ಕರೋನಾ ಮಾರಿಯ ಭೀಕರ ನರ್ತನ,
ವೈಭವಯುತ ದಸರಾಕೆ ತಂದಿತು ಕುತ್ತು,
ಸರಳ ದಸರಾ,ಸಾಂಪ್ರದಾಯಿಕ ದಸರಾ,
ಇಂದು ನಡೆದಿದೆ ಜನಾರೋಗ್ಯ ರಕ್ಷಣೆಯ ಸಾಂಸ್ಕೃತಿಕ ದಸರಾ,
ಕರೋನಾ ಸೇನಾನಿಗಳಿಗೆ ಸನ್ಮಾನ,
ವೈದ್ಯರಿಂದ ದಸರಾ ಉದ್ಘಾಟನೆ,
ಈ ಬಾರಿಯ ದಸರಾ ಜಗತ್ತಿಗೇ ಮಾದರಿ,
ಜನರ ಪ್ರಾಣ,ಸಾಂಸ್ಕೃತಿಕ ಅಭಿಮಾನ ರಕ್ಷಿಸಲಿದೆ,
ಮೈಸೂರಿನ ಸಾಂಸ್ಕೃತಿಕ ಕಿರೀಟಕೆ ಜನಪರ ಚಿಂತನೆಯ ರಂಗುತಂದಿದೆ..

ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು
ಮೊ:94496 80583,
63631 72368

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group