ಸಿಂದಗಿ; ಪೇಜ್ ಪ್ರಮುಖರ ಪೂರ್ವಭಾವಿ ಸಭೆ

Must Read

ಸಿಂದಗಿ: ನಿಜವಾದ ಭರವಸೆ ಬಿಜೆಪಿ ಬಿಟ್ಟರೆ ಬೇರೆ ಪರ್ಯಾಯವಿಲ್ಲವೆಂದು ಜನರಿಗೆ ಮನವರಿಕೆ ಮಾಡುತ್ತಿದ್ದೇನೆ ಆದರೆ ವಿರೋಧಿಗಳು ನೀವು ನನ್ನ ಬಗ್ಗೆ ಎಷ್ಟೆ ಅಪಪ್ರಚಾರ ಮಾಡಿದರೂ ಕುತಂತ್ರ ಮಾಡಿಯಾದರೂ ನಾನು ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ ಅದು ನನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ, ಬಳಗಾನೂರ  ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗು ಭೂತ್ ಅಧ್ಯಕ್ಷರು ಮತ್ತು ಪೇಜ್  ಪ್ರಮುಖರಿಂದ ಹಮ್ಮಿಕೊಂಡಿರುವ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೂಡು ಮತಯಾಚನೆ ಮಾಡುತ್ತೇನೆ. ಅಲ್ಲದೆ ಉಪ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದರು.

ಈ ಸಂದರ್ಭದಲ್ಲಿ  ಮಂಡಲ ಅಧ್ಯಕ್ಷ  ಈರಣ್ಣ ರಾವೂರ, ಜಿಪಂ ಮಜಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ, ಮಾಜಿ ಜಿಪಂ ಸದಸ್ಯ ಬಿ.ಆರ್.ಎಂಟಮಾನ, ಗುರು ತಳವಾರ, ಶ್ರೀಶೈಲ ಪರಗೊಂಡ, ಮಲ್ಲು ಬಾದನ, ಅಮರೇಶ ಸಾಲಕ್ಕಿ,  ಮಲ್ಲು ಸಾವಳಸಂಗ, ಪರಸುರಾಮ ಹೊಸಮನಿ,  ರಾಜಕುಮಾರ್ ಗೌಂಡಿ, ರವಿ ನಾಯಕವಾಡಿ, ವಿಠಲಗೌಡ ಬಿರಾದಾರ, ಮಾಳು ಗಡೆದ, ನರುಸು ಚವ್ಹಾಣ, ಮಲ್ಲು ಕುಂಬಾರ, ಗುರು ಹುಲ್ಲೂರ, ಸಿದ್ಧಲಿಂಗಯ್ಯ ಹಿರೇಮಠ, ಮಾಧ್ಯಮ ಪ್ರತಿನಿಧಿ ಶಿವಕುಮಾರ ಬಿರಾದಾರ ಸೇರಿದಂತೆ ಹಿರಿಯರು,ಪಕ್ಷದ ಮುಖಂಡರು,ಕಾರ್ಯಕರ್ತರು, ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group