ಕಾಂಗ್ರೆಸ್ ತನ್ನ ಗೌರವಕ್ಕೆ ಚ್ಯುತಿ ತಂದುಕೊಂಡಿದೆ

Must Read

ಬೀದರ: ಭಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂಬ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷ ತನ್ನ ಗೌರವಕ್ಕೆ ತಾನೇ ಚ್ಯುತಿ ತಂದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಬೀದರ್ ನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಭಜರಂಗದಳ ನಿಷೇಧ ಮಾಡುವ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮೂರ್ಖತೆಯ ಕೆಲಸವನ್ನು ಮಾಡಲು ಹೊರಟಿದೆ. ಇದರ ಪರಿಣಾಮವಾಗಿ‌ ರಾಜ್ಯದ ಹಿಂದೂಗಳು ಒಗ್ಗಟಾಗುತ್ತಾರೆ‌ ಹೀಗಾಗೀ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ಬಂದೇ ಬರುತ್ತದೆ ಎಂದರು

ದೇಶದ ಜನರು ಇದನ್ನು ಒಪ್ಪುವುದಿಲ್ಲ ಕಾಂಗ್ರೆಸ್ ಪಕ್ಷದ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸಾಹಿತಿ, ಅಂಕಣಕಾರ ಬನ್ನೂರು ಕೆ. ರಾಜು ಅವರ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಲಿ

ಸಾಹಿತಿ, ಸಂಸ್ಕೃತಿಯ ಸಂಘಟಕ, ಅಂಕಣ ಬರಹಗಾರ, ಪತ್ರಕರ್ತ, ಕನ್ನಡ ನೆಲ, ಜಲ, ಭಾಷೆ ವಿಷಯಕ್ಕೆ ಬಂದಾಗ ಹೋರಾಟಕ್ಕೆ ನಿಲ್ಲುವ ಕನ್ನಡ ಪ್ರೇಮಿ, ಕವಿ ಬನ್ನೂರು ಕೆ...

More Articles Like This

error: Content is protected !!
Join WhatsApp Group