ಕವನ: ಬುದ್ಧ ಪೂರ್ಣಿಮೆ

Must Read

ಬುದ್ಧ ಪೂರ್ಣಿಮೆ

ಆಸೆ ಗಳಿಗಾಗಿ ಬದುಕಲ್ಲ
ಆದರ್ಶಕ್ಕಾಗಿ ಬದುಕು
ಶಾಂತಿ ಸಂದೇಶ ಸಾರಿದ
ಭಗವಾನ್ ಬುದ್ಧ ನಮ್ಮ ಆದರ್ಶ

ಸಾವಿರ ಯುದ್ಧಗಳ ಗೆಲ್ಲುವ
ಮೊದಲು ನಿಮ್ಮ ನೀವು ಗೆಲ್ಲಿ
ನಿಮ್ಮ ಬಳಿ ಇರುವುದರ ಪ್ರೀತಿಸಿ
ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ

ಕೆಳಗೆಕುಳಿತ ವ್ಯಕ್ತಿ ಎಂದೂ
ಬೀಳಲಾರ
ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ
ಆತ್ಮವಿಶ್ವಾಸದ ಪ್ರತೀಕ

ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ
ದ್ವೇಷ ಅಸೂಯೆ ಅಳಿಯಲಿ
ಹುಟ್ಟು ಸಾವಿನ ನಡುವೆ ಇರಲಿ ಪ್ರೀತಿ
ದುಃಖ ಶಾಶ್ವತವಲ್ಲ ಪ್ರೀತಿ ಅಮರ

ಬುದ್ಧ ನುಡಿಗಳೆಮಗೆ ದಾರಿದೀಪ
ಅನುದಿನದ ಪಾಲಿಸುತ ಅವನ ಆದರ್ಶ
ಬುದ್ಧ ಪೂರ್ಣಿಮೆ ಸಾರ್ಥಕಗೊಳಿಸೋಣ
ಶಾಂತಿ ಅಹಿಂಸಾ ಜೀವನ ಸಂದೇಶ ಸಾರೋಣ


ನಂದಿನಿ ಸನಬಾಳ್

(ಯುವ ಕವಯತ್ರಿ ನಂದಿನಿ ಸನಬಾಳ್ ಅವರ ಕವನ ಬುದ್ಧ ಪೂರ್ಣಿಮೆ ಗೆ ರೇಖಾಚಿತ್ರವನ್ನು ನೀಡಿದ ಶಿಕ್ಷಕಿ ರೇಖಾ ಮೊರಬ ಅಣ್ಣಿಗೇರಿ)

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group