spot_img
spot_img

ಭಜರಂಗದಳ ಬ್ಯಾನ್ ಮಾಡ್ತೀವಿ ಅನ್ನೋರಿಗೆ ತಕ್ಕ‌ ಪಾಠ ಕಲಿಸಿ

Must Read

spot_img
- Advertisement -

ಬೀದರ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ವಿವಿಧ ಸಂಘಟನೆಗಳ ಜೊತೆಗೆ ಭಜರಂಗದಳ‌ವನ್ನು ಬ್ಯಾನ್ ಮಾಡುವ ವಿಚಾರಕ್ಕೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಭಾಲ್ಕಿ ಪಟ್ಟಣದ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದರು.

ಅಷ್ಟೆ ಅಲ್ಲದೇ ಬಸವಕಲ್ಯಾಣ ಪಟ್ಟಣದಲ್ಲಿ ಹಿಂದೂಪರ ಕಾರ್ಯಕರ್ತರು ಭಜರಂಗದಳ ಬ್ಯಾನ್ ಮಾಡ್ತೇವೆ ಅನ್ನೋರಿಗೆ ತಕ್ಕಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.

 

- Advertisement -

ಬಸವಕಲ್ಯಾಣ ಪಟ್ಟಣದಲ್ಲಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಹಿಂದೂಪರ ಕಾರ್ಯಕರ್ತರು ದೇಶವಿರೋಧಿ ಕೆಲಸ ಮಾಡುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನ ಬ್ಯಾನ್ ಮಾಡೊದು ಬಿಟ್ಟು, ಧರ್ಮ ಸಂಸ್ಕೃತಿ ಕಾಪಾಡುವ ಹಿಂದು ಸಂಘಟನೆಯನ್ನ ಬ್ಯಾನ್ ಮಾಡ್ತೇವೆ ಅಂತಾ ಹೇಳಿರೋದು ಖಂಡನೀಯ.

ಭಜರಂಗದಳ ಸಂಘಟನೆಯು ಸಮಾಜ ವಿರೋಧಿ ಸಂಘಟನೆ ಅಲ್ಲ ಹಿಂದೂ ಸಮಾಜದ ರಕ್ಷಣೆಗಾಗಿ ಗೋ ಮಾತೆಯ ರಕ್ಷಣೆಗಾಗಿ, ಹಿಂದೂ ಸಹೋದರಿಯರ ಮಾನ ಸಮ್ಮಾನ ಸಂರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧವಾಗಿರುವ ಈ ಕೇಸರಿ ಯುವಕರ ಪಡೆಯಿದು. ಇಡೀ ದೇಶದಲ್ಲಿ ಬಜರಂಗದಳ ತನ್ನ ಕಾರ್ಯಕರ್ತರ ಮುಖಾಂತರ ಸಾಮಾಜಿಕ ಸೇವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಅಂತಹ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡುತ್ತೇವೆ ಎಂದು ಹೇಳಿರುವುದು ಖಂಡನೀಯ.

- Advertisement -

ಹಾಗಾಗಿ ಈ ಬಾರಿ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು, ದೇಶದ ಸಂಸ್ಕೃತಿ ಹಾಗೂ ಭದ್ರತೆ ಕಾಪಾಡುವ ಪಕ್ಷಕ್ಕೆ ಮತ ನೀಡಬೇಕು ಎಂದು‌ ಮನವಿ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group