Homeಸುದ್ದಿಗಳುಆಣೆ ಮಾಡಿಸಿ ಹಣ ಹಂಚಿದ ಪ್ರಭು

ಆಣೆ ಮಾಡಿಸಿ ಹಣ ಹಂಚಿದ ಪ್ರಭು

ಬೀದರ: ನಮ್ಮ ಓಟ ಪ್ರಭು ಚವ್ಹಾಣ ಅವರಿಗೆ ಎಂದು ಮತದಾರರಿಗೆ ಹೇಳಿಕೊಟ್ಟು ಅವರ ಕೈಗೆ  ಐದು ನೂರು ರೂಪಾಯಿ ಇಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಬೀದರ ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಬಗ್ಗೆ ಶಂಕೆ ಇದೆ ಎನ್ನಲಾಗಿದೆ.

ಔರಾದ ಮೀಸಲು ಕ್ಷೇತ್ರದಲ್ಲಿ ಕುರುಡು ಕಾಂಚನಾ ಸದ್ದು ಮಾಡಿದೆ. 

ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಪ್ರಭು ಚವ್ಹಾಣ ಪರವಾಗಿ ಔರಾದನ ಪ್ರತಿಯೊಂದು ಗ್ರಾಮದಲ್ಲಿ ಮನೆ ಮನೆಗೆ ಹೋಗಿ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ ಅವರಿಗೆ ಓಟು ಹಾಕಿ ಎಂದು ಐದು ನೂರು ಕೊಡುತ್ತಿರುವ ದೃಶ್ಯ ವೈರಲ್ ಆಗಿದೆ. ಸೋಲುವ ಭೀತಿಯಿಂದ ಅಕ್ರಮವಾಗಿ ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group