ಕವನ: ಕಡಲ ಮುತ್ತು

Must Read

ನಲಿವ ಮನದಲಿ ಕುಣಿದು ನಿಲ್ಲಲು

ಒಲಿದ ಚೆಲುವಿನ ಮಾನಿನಿ|
ಜಲದ ಮತ್ಸ್ಯದ ತೆರದಿ ಹರಿಯುವ
ಚಲಿಸಿ ಹೋಗಿಹ ಭಾಮಿನಿ||

ಕಂಗಳಂದದಿ ಮುಗುಳು ನಗೆಯದು
ರಂಗಿನಲ್ಲಿಯೆ ಮಿನುಗುತ|
ಸಂಗ ಬಯಸುತ ಬಂದೆ ಚೆಲುವಿಗೆ
ಭೃಂಗದಂತೆಯೆ ಅರಸುತ||

ಕಡಲ ಮುತ್ತಲಿ ಹೊಳೆವ ಪ್ರೇಯಸಿ
ತಡಿಯ ಲತೆಯಲಿ ಹೊಳೆಯುವೆ|
ಒಡಲ ಪ್ರೀತಿಯ ಬಿಚ್ಚಿ ಹೇಳುವೆ
ಪಡುವ ಕಡಲಲಿ ಇಳಿಯುವೆ||

ಮೌನ ಧರಿಸದೆ ಒಲಿದು ಬಾರೆಯ
ತಾನ ತಂದನವೆನುತಲಿ|
ಗಾನ ಮೋಹನ ರಾಗ ನುಡಿಸುವ
ಜಾಣೆ ವೀಣೆಯ ನುಡಿನಲಿ||

ಗೌರವರ್ಣವು ತನುವು ತುಂಬುತ
ಶೌರ ತೋರದೆ ತೋಳಲಿ|
ತಾರೆಯಂತೆಯೆ ಮನದಿ ನಲಿಯುವೆ
ನೀರೆ ನನ್ನಯ ಬಾಳಲಿ||

ಶಂಕರಾನಂದ ಹೆಬ್ಬಾಳ
೮೭೨೨೦೫೦೫೩೨

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group