ಕವನ: ಮುದುಡಿದ ತಾವರೆ

Must Read

ಮುದುಡಿದ ತಾವರೆ

ಯಾರ ಆಸರೆಯು ಪಡೆಯದವಳು
ಕೋಲಿನ ಆಸರೆ ಪಡೆದು ನಡೆದಳು
ಜೀವದಾಸೆ ತೊರೆದು ಬಾಳುವವಳು
ಒಂಟಿಯಾಗಿ ರಸ್ತೆಯಲಿ ಸಾಗಿದಳು.

ಹಣ್ಣಾದ ಮುದುಕಿ ಬಾಗಿ ನಡೆದಳು
ಜೀವನದ ಕಷ್ಟಗಳು ನುಂಗಿ ಬಿಟ್ಟಳು
ಹಲವು ತಿರುವುಗಳು ಸಾಗಿ ಬಂದಳು
ನೋವಿನ ಮೊಗವು ತೋರಿಸದವಳು.

ಮುದುಡಿದ ತಾವರೆ ಮುಖದವಳು
ಬಿಳಿ ಕೂದಲು ಹರಕು ಸೀರೆಯವಳು
ಅಂಕುಡೊಂಕು ರಸ್ತೆಯಡಿ ಹೋದಳು
ಯಾರನ್ನೂ ದೂಷಿಸದ ಗುಣದವಳು.

ಜೀವನದ ಬೇಸರವ ನಡೆದು ಕಳೆವಳು
ಮುಂಜಾನೆ ಮಂಜಿನಲಿ ಸುತ್ತಾಡುವಳು
ಮೂಲೆಯಲ್ಲಿ ಕೂಡದ ಯೌವ್ವನದವಳು
ಕಾಲನ ಬರುವಿಕೆಗೆ ಕಾಯುತ್ತಿರುವವಳು.

ಮಹಾದೇವ ರಾಯಚೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group