ಬಾಗಲಕೋಟೆ – ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿಯಾಗಿರುವ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಶ್ರೀಕೃಷ್ಣ ಶಿವಾನಂದ ಬನ್ನಿದಿನ್ನಿ, ಶೇ. 91 ಅಂಕಗಳನ್ನು ಪಡೆದು ಅಂಧರ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಹಾಗೂ ಕೆಂಗುಲಾಬಿ ಹಾಗೂ ಇಂಗಳೆ ಮಾರ್ಗ ಚಲನಚಿತ್ರ ನಿರ್ಮಾಪಕರಾದ ಬಾಗಲಕೋಟೆಯ ಘನಶ್ಯಾಂ ಭಾಂಡಗೆಯವರು ಮತ್ತಿಕಟ್ಟಿ ಗ್ರಾಮದ ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಯ ತಂದೆ ತಾಯಿ ಹಾಗು ಕುಟುಂಬಸ್ಥರು ಉಪಸ್ಥಿತರಿದ್ದರು.