ಬೆಂಗಳೂರು – ಕುರುಹಿನಶೆಟ್ಟಿ ಕೇಂದ್ರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ದಾವಣಗೆರೆ ಕುರುಹಿನಶೆಟ್ಟಿ ಸಮಾಜದ ಯುವ ನೇತಾರ ವಿಠಲ್ ಅಮಾಸಿ ನೇಮಕಗೊಂಡಿದ್ದಾರೆ.
ಇವರನ್ನು ಬೆಂಗಳೂರಿನ ಸಂಘದ ಕಾರ್ಯಾಲಯದಲ್ಲಿ ಕುರುಹಿನಶೆಟ್ಟಿ ಕೇಂದ್ರ ಸಂಘದ ಅಧ್ಯಕ್ಷರಾದ ಅಂಬಾದಾಸ್ ವಿ ಕಾಮೂರ್ತಿ, ಉಪಾಧ್ಯಕ್ಷರಾದ ಜಿ ಸೋಮಶೇಖರ್, ಕಾರ್ಯಾಧ್ಯಕ್ಷರಾದ ಬೈರಶೆಟ್ರು ಸೇರಿದಂತೆ ಸಂಘದ ಪದಾಧಿಕಾರಿಗಳು ಗೌರವಿಸಿದರು.
ನೂತನ ಸಂಘಟನಾ ಕಾರ್ಯದರ್ಶಿಗಳಿಗೆ ಸಮಸ್ತ ನೇಕಾರ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಅಭಿನಂದನೆಗಳು ಎಂದು ಗಂಗಾವತಿಯ ಮಲ್ಲಿಕಾರ್ಜುನ ಪೋಲಕಲ್ ತಿಳಿಸಿದ್ದಾರೆ