ಕವನ

Must Read

ವಿಶ್ವ ಪರಿಸರ ದಿನಾಚರಣೆ 

ನೀರು ಅಲ್ಪತೆ
ಭೂಮಿ ಹಿಂಗದೆ
ಹಳ್ಳಿಗಳ ಹಳ್ಳಕ್ಕೆ ರಕ್ಕಸರಂತೆ
ಆಕ್ರಮಿಸಿತು ಜಗಕ್ಕೆಲ್ಲ ಈ ಸಿಮೆಂಟ್….!!

ಹಳ್ಳಿಗಳ ಹಳ್ಳದ
ಮರಳುಗಳ್ಳರು
ಪಾತಾಳಕ್ಕಿಟ್ಟು ದೋಚಿದರು
ವರ್ತಿಯೇ ಇಲ್ಲದ ಭೂ ಮಾತೆ ಬಂಜೆಯಾದಳು…!!

ಕಾಡು ಇದ್ದರೂ
ಕಾಡುಗಳ್ಳರು ದೋಚಿದರು
ವಿರಳ ಹಸಿರತೆ ಮರುಭೂಮಿಯಾದರೆ
ಕಾಡುಪ್ರಾಣಿಗಳು ಹೊಕ್ಕವು ನಗರ ಪಟ್ಟಣಗಳಿಗೆ…!!

ಬಿಸಿಯ ತಾಪಕ್ಕೆ ವಿಶ್ವವೇ
ಹೊತ್ತಿ ಉರಿದು ತಾಪಮಾನ ಏರಿಕೆಯಿಂದ
ಜಗದ ಜನರ ಮನಸುಗಳ ಬಿಸಿಯು ನೆತ್ತಿಗೇರಿದ
ವಿಕೃತಿಯ ತಾಪಮಾನಕ್ಕೆ ಬುದ್ಧಿ ಭ್ರಮಿಸಿತು….!!

ಪ್ರಕೃತಿ ಪಂಚಭೂತಗಳ
ಕಾಲಗಳ ಲಯವಿಲ್ಲದ
ಕಾಲ ಪ್ರಕೃತಿಯು ದಿಕ್ಕೆಟ್ಟು ಕೆಂಡದ ಮಳೆಯಾಗಿದೆ
ಪ್ರಕೃತಿಯೇ ತಾಳ ತಂತು ತಪ್ಪಿದ ಕಾಲಮಾನವಾಗಿದೆ…!!

ಪ್ರಕೃತಿಯ ಪರಿಸರಕ್ಕೆ
ಯಾರಿಗೆ ಯಾರೆಂದರೆ ನನಗೆ ನಾನೆಂದರೆ
ನಮ್ಮೆಲ್ಲರ ಅಹಂ ಅವತರಿಸಿದರೆ ಮುಂದೆ
ಇರುವುದು ನಮಗೆಲ್ಲಾ ಕಾದಿಟ್ಟ ಘೋರ ಶಿಕ್ಷೆ…!!

ಸಂಗಮ್ ಟಿ.ಜಿ.
ಗಣಿತ ಶಿಕ್ಷಕರು, ಕೊಟ್ಟೂರು.
ಮೊಬೈಲ್ : 7813074106

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group