ಕವನ

Must Read

ಬೇಕಿಲ್ಲ ಸಮತೆ ಕ್ರಾಂತಿ

ಎಂದೂ ಸೋಲದ
ಆರ್ಯ ಪುರುಷ
ವೀರ ಶೂರ ಕ್ಷತ್ರಿಯ
ಶ್ರೀ ರಾಮಚಂದ್ರ ಮೊನ್ನೆ
ಆಯೋಧ್ಯೆಯಲ್ಲಿಯೇ
ಸೋತು ಬಿಟ್ಟ
ಅವನೊಬ್ಬ ಮಹಾಪುರುಷ
ಮನುಷ್ಯ ನಿರ್ಮಿತ
ಜಾತಿ ಮತ ಧರ್ಮಗಳ
ಸೀಮೆ ದಾಟಿದ ಯೋಧ
ಶ್ರೀರಾಮನ ಶಾಪವೊ
ಕೋಪವೊ ಗೊತ್ತಿಲ್ಲ
ಇವರೂ ಸೋತು ಬಿಟ್ಟರು
ಈಗ ಪುರಿಯಲ್ಲಿ
ಜಗನ್ನಾಥನ ಸರದಿ
ಪಾಪ ಅವನಿಗೂ
ಭಯ ಭೀತಿ
ಅವರು ಇಲ್ಲಿ ಗೆದ್ದಿದ್ದಾರೆ
ಬುದ್ಧ ಬಸವ ಬಾಪು
ಅಂಬೇಡ್ಕರ ಎಂದೋ
ಸೋತು ಬಿಟ್ಟರು
ಸರ್ವರಿಗೂ ಸಮಪಾಲು
ಸರ್ವರಿಗೂ ಸಮಬಾಳು
ಇದು ಭಾಷಣ ಲೇಖನ
ಗೋಡೆಯ ಮಾತು
ಬದಲಾಗುವದಿಲ್ಲ ಭಾರತ
ಬೇಕಿಲ್ಲ ಸಮತೆ ಕ್ರಾಂತಿ

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group