ಕವನ

Must Read

ವಿಧಾನಸೌಧ ಮಳಿಗೆಯು

ಅವರು ಕಳ್ಳರೆಂದು ಅರಿತು
ನಾವು ನಿಮಗೆ
ಮತವ ಕೊಟ್ಟೆವು
ನೀವು ಕೊಳ್ಳೆ
ಲೂಟಿ ಹೊಡಿದಿರಿ
ಭೂಮಿ ಬಿರುಕು ಬಿಟ್ಟಿತು

ಅವರು ಸುಳ್ಳರು
ಎಂದು ತಿಳಿದು
ನಿಮ್ಮ ಆಯ್ಕೆಯಾಯಿತು
ಅಲ್ಲ ನೀವು ಸತ್ಯವಂತರು
ಅಲ್ಲ ಅವರು ನೀತಿವಂತರು
ವಿಧಾನಸೌಧ ಮಳಿಗೆಯು

ತೆರಿಗೆ ತುಡುಗು ಮಾಡಿ
ನೀವು ಭವ್ಯ ಬಂಗಲೆ
ಕಟ್ಟಿ ಕೊಂಡಿರಿ
ಹೆಸರಿಗೊಂದು ಚುನಾವಣೆ
ಪ್ರಜಾಪ್ರಭುತ್ವ ಘೋಷಣೆ
ನೀವು ಅವರು ಹಂಚಿಕೊಂಡಿರಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group