ಮೂಲ ಕೃಷಿ ಪದ್ಧತಿ ದೂರವಾಗುತ್ತಿದೆ – ಮಹಾಂತಯ್ಯ ಗಚ್ಚಿನಮಠ

Must Read

ಹುನಗುಂದ –  ಅಗತ್ಯ ತಂತ್ರಜ್ಞಾನ ಬಳಕೆಯೊಂದಿಗೆ ಯುವಕರು ಓದಿನ, ಜೊತೆ ಪೂರ್ವಜರ ಕೃಷಿ ಪದ್ಧತಿ ಮೂಲ ಒಕ್ಕಲುತನದ ಮರು ಜೀವಕ್ಕೆ ಹೆಚ್ಚು ಹೊತ್ತು ನೀಡಬೇಕೆಂದು ಸೌಂದರ್ಯ ಸೌಹಾರ್ದಯುತ ಕೃಷಿ ಪರಂಪರೆಯ ಗಚ್ಚಿನ ಮಠದ ವೇದಮೂರ್ತಿ ಮಹಾಂತಯ್ಯ ಗಚ್ಚಿನ ಮಠ ಹೇಳಿದರು

ಪಟ್ಟಣದ ಗಚ್ಚಿನಮಠದಲ್ಲಿ ನಾಡಿಗೆ ಹೆಸರಾದ ರೈತ ಮತ್ತು ಎತ್ತು ರಾಸುಗಳ ಹಬ್ಬ ಕಾರ ಹುಣ್ಣಿಮೆಯ ನಿಮಿತ್ತ ನಡೆಸಿದ ಕೃಷಿ ಪರಿಕರಿಗಳ ವಿಶೇಷ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು

ದೇಶಕ್ಕೆ ಅನ್ನ ನೀಡುವ ರೈತನಿಗೆ ಮತ್ತು ವರ್ಷವಿಡಿ ದುಡಿದು ಬೆಳೆದ ಫಸಲಿಗೆ ಬೆಲೆ ಇರದೆ ದಲ್ಲಾಳಿಗಳ ಪಾಲಾಗುತ್ತಿದೆ ಮತ್ತು ಕೃಷಿ  ನೀತಿ ಸರಿಯಾಗಿ ಇಲ್ಲದಿರುವುದಕ್ಕೆ ಮೂಲ ಕೃಷಿ ಪದ್ಧತಿ ದೂರವಾಗುತ್ತಿದೆ ರೈತನ ಉಳಿವಿಗೆ ಸೂಕ್ತ ಕೃಷಿ ನೀತಿ ಒದಗಿಸದಿದ್ದರೆ ಸೋತು ನೆಲಕಚ್ಚುವ ರೈತ ಮತ್ತು ಕೃಷಿ ಪದ್ಧತಿ ಹಿಂದೆ ಸರಿಯುವುದರಲ್ಲಿ ಸಂಶಯವೇ ಇಲ್ಲ ಸರ್ಕಾರ ಹೆಚ್ಚು ಗಮನಹರಿಸಿ ಸಾಕಷ್ಟು ಕೃಷಿ ಚಟುವಟಿಕೆಗಳನ್ನು ತಟ್ಟಿ ಉತ್ತೇಜನ ನೀಡಿ ಯುವಕರನ್ನು ಪ್ರೋತ್ಸಾಹಿಸಿದಾಗ ಮೂಲ ಕೃಷಿ ಚೇತರಿಕೆ ಆಗುತ್ತದೆ ಎಂದರು,

ರೈತ ನಾಗಪ್ಪ ತ್ಯಪ್ಪಿ ಕೃಷ್ಣ ಜಾಲಿಹಾಳ ಮಾತನಾಡಿದರು ಮುತ್ತಣ್ಣ ಹವಾಲ್ದಾರ್ ಪರಮೇಶ ಬಾಗವಾಡಗಿ ವೀರೇಶ ಕುರ್ತುಕೋಟಿ ಮಲ್ಲನಗೌಡ ಪಾಟೀಲ ವೆಂಕಟರಮಣಿ ಶಿವಪ್ಪ ಸುಂಕಾಪೂರ ಹಾಜರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group