spot_img
spot_img

ಕವನ

Must Read

- Advertisement -

ಜಗವೆ ಕೂಡಲ ಸಂಗಮ

ಬಸವ ಬಳ್ಳಿ ಲಿಂಗ ಜಂಗಮ
ಜಗವೆ ಕೂಡಲ ಸಂಗಮ.
ಅರಿವೇ ಗುರುವು ,ನಡೆಯು ಲಿಂಗ
ನುಡಿಯೇ ಅಮರ ಜಂಗಮ .

ಅಂಗವಳಿದು ಲಿಂಗವಿಡಿದು
ಶರಣ ಬಾಳು ಸ್ಪಂದನ .
ಲಿಂಗ ಮಜ್ಜನ ಪಾದದುದಕ
ಅರಿವು ಸ್ಪೂರ್ತಿಯ ಸಿಂಚನ .

- Advertisement -

ಸತ್ಯವೆಂಬುದೆ ನಿತ್ಯ ಪಠಣ,
ನೀತಿ ಪಾಠದ ಮಂಥನ .
ನೆಲದ ಮೇಲೆ ಬೆಳಕು ಚೆಲ್ಲಿದೆ
ಜಗದಿ ನಿತ್ಯ ವಚನ ಚಿಂತನ .

ಒಂದು ಮಾಡಿದ ಹಿರಿದು ಕಿರಿದು
ಸಮತೆವೆಂಬ ದೀಪವು .
ಉಚ್ಚ ನೀಚ ಭೇದ ಹರಿಯಿತು
ಅದುವೇ ಧರ್ಮ ಧೂಪವು .

ಗುಡಿಗಳೆಲ್ಲ ನಲುಗಿ ಹೋದವು
ವೇದ ಶಾಸ್ತ್ರ ಪುರಾಣವು .
ದಲಿತ -ಮಹಿಳೆ -ಅಸಹಾಯಕರು
ಬಸವ ಧರ್ಮದ ಒಡೆಯರು

- Advertisement -

ಜಿಡ್ಡುಗಟ್ಟಿದ ಕಟ್ಟು ಕಳಚಿತು
ಮುಕ್ತ ವಿಶ್ವದ ಪ್ರೇಮವು .
ಬಸವನುಸಿರೆ ದಿವ್ಯ ಮಂತ್ರವು ,
ಲಿಂಗವಂತ ಸ್ವತಂತ್ರವು

ಡಾ. ಶಶಿಕಾಂತ. ರು. ಪಟ್ಟಣ -ಪೂನಾ

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group