ಹೊಸತನದ ಆಸಕ್ತಿಯೇ ಗಜಲ್ ಬೆಳವಣಿಗೆಗೆ ಕಾರಣ

Must Read

ಅತ್ತಣ ಕೋಗಿಲೆ ಇತ್ತಣ ಮಾಮರ ಅತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕದ ಮಾಮರ ಎಂಬ ಹಾಗೆ ಗಜಲ್ ನಡೆದು ಬಂದ ದಾರಿಯಾಯಿತು ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ ಎಂದು ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ದಿ. ೨೫  ರಂದು ಕಲಬುರ್ಗಿಯಲ್ಲಿ ವಿಶ್ವ ವಿದ್ಯಾಲಯ,ಗಜಲ್ ಎಕಾಡೆಮಿಗಳ ಸಹಯೋಗದಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಗಜಲ್ ಸಮ್ಮೇಳನದಲ್ಲಿ ಮಾತನಾಡಿದರು.

ಗಜಲ್ ನಡೆದು ಬಂದ ಹಾದಿ ಎಂಬ ಗೋಷ್ಠಿಯ ಚಾಲನೆ ಮಾಡಿದ ಅವರು ಭಾರತದ ಹೆಸರಾಂತ ಗಜಲ್ ಕಾರರ  ಬಗೆಗೆ ಹೇಳುತ್ತಾ ಕರ್ನಾಟಕ ಇಂದು ಅತಿ ಹೆಚ್ವು ಗಜಲ್ ಬರಹಗಾರರನ್ನು ಹೊಂದಿದೆ. ಭಾವನೆಗೆ ನಿಯಮಾವಳಿಗಳ ಮೂಲಕ ಕೊಡುವ ಚೌಕಟ್ಟು ಗಜಲ್ ಗೆ ಮೂಲ ಸ್ತಂಭ ಎಂದವರು ಹೇಳಿದರು.

ಖ್ಯಾತ ಕವಿ ಅಲ್ಲಾಗಿರಿ ರಾಜರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಶ್ರೀದೇವಿ ಕೆರೆಮನೆ , ಯಾಕೊಳ್ಳಿ ಹಾಗೂ ಅರುಣಾ ನರೇಂದ್ರ ರವರು ಪ್ರಬುದ್ಧ ಪ್ರಬಂಧ ಮಂಡಿಸಿದರು.
ಸಂಘಟಕ ಮಹೀಪಾಲ ರೆಡ್ಡಿ,ಹೈತೋ,ಗಜಲ್ ಎಕಾಡೆಮಿ ಅಧ್ಯಕ್ಷ ರಂಗಸ್ವಾಮಿ, ರತ್ನ ರಾಯ ಮಲ್ಲ, ಸಿದ್ಧರಾಮ ಹೊನಕಲ್, ಹಾ.ಮ.ಸತೀಶ, ಮತ್ತು ಆಕಾಶವಾಣಿಯ ಸದಾನಂದ ಪೆರ್ಲ, ಡಾ ಹಸೀನಾ ಶಿವಮೊಗ್ಗ , ನೂರ್ ಮಹಮ್ಮದ್, ನಂರುಶಿ ಮತ್ತನೇಕ ಖ್ಯಾತನಾಮರು ಉಪಸ್ಥಿತರಿದ್ದರು.

ನೂರು ಕವಿಗಳ ರಚಿತ ಗಜಲ್ ಸಂಕಲನ ಬಿಡುಗಡೆ ಈ ಸಂದರ್ಭದ ವಿಶೇಷತೆಗಳಲ್ಲೊಂದು.
ನಟ ನಿರೂಪಕ ಗಾಯಕ ಶ್ರೀನಿವಾಸ ಪ್ರಭು ಪ್ರಮುಖ ಆಕರ್ಷಣೆಯಾಗಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group