‘ಪುಷ್ಪ’ ಮಾದರಿಯಲ್ಲಿ ರಕ್ತ ಚಂದನ ಕಳ್ಳಸಾಗಣೆ ; ಭರ್ಜರಿ ಬೇಟೆಯಾಡಿದ ಬೀದರ ಪೊಲೀಸರು

Must Read

ಬೀದರ – ‘ಪುಷ್ಪ’ ಚಲನ ಚಿತ್ರದ ಮಾದರಿಯಲ್ಲಿ ಬೊಲೆರೋ ವಾಹನದ ಕೆಳಗಡೆ ಜಾಗ ಮಾಡಿ ಅದರಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವೊಂದನ್ನು ಬೀದರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಸುಮಾರು ೨೧ ಲಕ್ಷ ರೂ. ಮೌಲ್ಯದ ೧೦೦ ಕೆಜಿ ರಕ್ತ ಚಂದನ ಕಟ್ಟಿಗೆಯನ್ನು ಜೀಪ್ ನ ಕೆಳಗಡೆ ಇನ್ನೊಂದು ಭಾಗ ಮಾಡಿ ಕಳ್ಳತನದಿಂದ ಸಾಗಿಸಲಾಗುತ್ತಿತ್ತು. ಇದಲ್ಲದೆ ಒಟ್ಟು ಒಂಬತ್ತು ಪ್ರಕರಣಗಳನ್ನು ಭೇದಿಸಿದ ಪೊಲೀಸರು ೭ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೂರು ಮನೆಗಳ್ಳತನ ಪ್ರಕರಣದಲ್ಲಿ ೨೮ ಲಕ್ಷಕ್ಕು ಅಧಿಕ ಮೌಲ್ಯದ ಚಿನ್ನಾಭರಣಗಳು, ಒಂದು ಪಂಪ್ ಸೆಟ್ ಹಾಗೂ ಸರಗಳ್ಳತನ ಭೇದಿಸಿ ೫ ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳು ಹಾಗೂ ಬಸವಕಲ್ಯಾಣ, ಹುಮನಾಬಾದ, ಮನ್ನಾ ಏಖೆಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಭೇದಿಸಿ ಭರ್ಜರಿ ಬೇಟೆಯಾಡಿದ್ದಾರೆ ಬೀದರ ಪೊಲೀಸರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಪ್ರದೀಪ ಗುಂಟಿ ಮಾಹಿತಿ ಹಂಚಿಕೊಂಡರು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group