ಕವನ : ಬೇಕೆನಗೆ ಸಾಂಗತ್ಯ

Must Read

ಬೇಕೆನಗೆ ಸಾಂಗತ್ಯ

ನೀ ಬಂದ ಗಳಿಗೆ
ಸಂಭ್ರಮದ ಹೋಳಿಗೆ

ನೋವೆಲ್ಲಾ ಮರೆಸಿ
ಕರುಳ ಸಂಬಂಧ ಆದರಿಸಿ.

ನನ್ನದ್ದೆಲ್ಲವ ತೊರೆದು
ನಿನ್ನಲ್ಲಿ ನಾ ಬೆರೆತು
ಸ್ವರ್ಗ ಧರೆಗಿಳಿದಂತೆ
ನಿನ್ನಾರೈಕೆಯ ಹೆಗಲ ಹೊತ್ತು.

ಬೆಳೆಸಿದೆ ಬಾಂಧವ್ಯ
ಬೇಕು ಬೇಡಿಕೆಗಳ ಪೂರೈಸಿ
ಉರುಳುತಿದೆ ದಿನಮಾನ
ನಾನೇನಾ ಎಂಬ ಅನುಮಾನ.

ದಡ ಸೇರಿಸುವ ಹೊಣೆ
ಮುಡಿಗೇರಿದ ಬವಣೆ
ಹಗಲು ಇರುಳಿನ ಪರಿವೆಯಿಲ್ಲ
ಮುಗುಳು ನಗೆಯ ಮುನಿಸೆಲ್ಲ.

ಬೆಳೆದು ನೀನಾದೆ ಹೆಮ್ಮರ
ಮೈದಳೆದ ಹೊಸ ಆಶಯದಿ
ಬರಿದು ಕಾನನ ನಾನು
ಮುಕ್ಕಿ ತಿನ್ನುತಿಹ ಒಂಟಿತನ.

ಕೇಳುವವರಿಲ್ಲದ ಬೆಂಗಾಡು
ಮೊದಲಿತ್ತಿದು ನಂದನ
ಕೈಚೆಲ್ಲಿದೆ ನಿರ್ಲಕ್ಷಿಸಿ
ನೇವರಿಸುವರಿಲ್ಲದ ಕೊರಗು.

ಬೇರೇನೂ ಬೇಡ
ಆಲಂಗಿಸಿ ಬಿಡೊಮ್ಮೆ
ಆದರಿಸಿ ಸಂತೈಸೊಮ್ಮೆ
ಕರುಣೆ ಅನುಬಂಧದಿ ನೋಡ.

ಅಗಲಿದಾಗ ಕಣ್ಣೀರು ಬೇಡ ಎನಗೆ
ಹೋಗುವ ಮುನ್ನ ಅಲಿಂಗನದ ಬಯಕೆ
ಸಾಂಗತ್ಯ ಗೀತೆ ಗಡಿಬಿಡಿ
ಪ್ರೀತಿ ತೋಟದ ಹೂವು ಅರಳಲು ಬಿಡಿ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...

More Articles Like This

error: Content is protected !!
Join WhatsApp Group