Homeಕವನಕವನ : ಕಟ್ಟ ಬನ್ನಿ

ಕವನ : ಕಟ್ಟ ಬನ್ನಿ

spot_img

ಕಟ್ಟ ಬನ್ನಿ

ಗೆಳೆಯರೇ
ನಾವು ದೊಡ್ಡ ದೇಶದ
ದಡ್ಡ ಜನರು
ಮೂಢರು ಮೂರ್ಖರು
ಭಾವುಕರು ಮುಗ್ಧರು
ದೊಡ್ಡವರನ್ನು ತಲೆಯ ಮೇಲೆ
ಹೊತ್ತು ಕುಣಿಯುವವರು

ಬಾಬಾಸಾಹೇಬ ಅಂಬೇಡ್ಕರರನ್ನು
ದಲಿತರಿಗೆ ಮೀಸಲಿಟ್ಟೆವು
ಆಗಲಿಲ್ಲ ರಾಷ್ಟ್ರ ನಾಯಕ
ಕ್ರಾಂತಿಕಾರಿ ಬಸವನನ್ನು
ಕಾವಿ ಮಠಗಳು ಕಟ್ಟಿಬಿಟ್ಟವು
ಆಗಲಿಲ್ಲ ಜಗದ ಬೆಳಕು

ಅವನ ಹೆಸರಲಿ ಬದುಕುತಿಹೆವು
ಗಾಂಧಿಯನ್ನು ಕೊಂದು ಬಿಟ್ಟೆವು
ಒಂದು ಪಕ್ಷ ಕಟ್ಟಿಬಿಟ್ಟೆವು
ಪಠ್ಯದಲ್ಲಿ ಚರಕ ನೂತು
ಗ್ರಾಮ ರಾಜ್ಯ ಕಂಡೆವು

ಬುದ್ಧನನ್ನು ಓಡಿಸಿದೆವು
ದೇಶ ಬಿಟ್ಟು ಗಡಿಯಾಚೆ
ವಿಶ್ವ ತುಂಬಾ ಅವನ ನೆನಹು
ಇಲ್ಲಿ ಮಾತ್ರ ಕತ್ತಲು.

ಜಾತಿ ಧರ್ಮ ಪಂಥ ಕದನ
ನಿಲ್ಲಲಾರದ ರೋದನ
ಎಲ್ಲಾ ಬಿಟ್ಟು ಕಟ್ಟ ಬನ್ನಿ
ನಮ್ಮ ಭಾರತ ಸಾಧನ
__________________

ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

RELATED ARTICLES

Most Popular

error: Content is protected !!
Join WhatsApp Group