ಕವನ : ವಿಧವೆಯಾದಳು ವೀರ ಮಡದಿ

Must Read

ಹಿಮದ ಅಡಿಯಲ್ಲಿ ಸಿಕ್ಕು ೭ ದಿನ ಬದುಕಿ ಹೊರಗೆ ಬಂದು ಪ್ರಾಣ ಬಿಟ್ಟ ಹಣಮಂತ ಕೊಪ್ಪದ ಇವರ ಸ್ಮರಣೆಗೆ

ವಿಧವೆಯಾದಳು ವೀರ ಮಡದಿ
————————————-
ಅಂದು ಸೂರ್ಯ ಮುಳುಗಿರಲಿಲ್ಲ.
ದನಕರು ಮೇಕೆ ಹಟ್ಟಿಗೆ ಬಂದವು.
ರೈತರ ಜಗುಲಿಯ ಮೇಲೆ ಹರಟೆ
ಸಂಜೆ ಟಿವಿ ಬಾನುಲಿಯ ಸುದ್ಧಿ.
ಹಿಮದಡಿಗೆ ಹೂತು ಹೋದ ಯೋಧರು.
ಹುಡುಕಲಾಗಲಿಲ್ಲ ಅವನ
ವಾರ ಕಳೆಯಿತು ದಿನಗಳುರುಳಿ
ದುಗುಡು ನೋವು ಮಡುವಾಯಿತು.
ಉಸಿರುಗಟ್ಟಿ ದರೂ ಬದುಕಿಬಿಟ್ಟ
ಹೊರಗೆ ಬಂದು ನಸು ನಕ್ಕು
ನಾ ಸಾಯುವೆ ದೇಶಕೆಂದ
ಅವ್ವ ಅಣ್ಣ ಹೆಂಡತಿಯ ಸಂತಸ
ದೇಶವೆಲ್ಲ ಪ್ರಾರ್ಥಿಸಿತು
ಕಲ್ಲು ದೇವರು ಕರುಣಿಯಲ್ಲ
ಜೀವ ಹೀರಿತು ಹನುಮಂತನದು
ಗಂಡ ಉಳಿದರೆ ಮತ್ತೆ ಯುದ್ಧಕೆ
ದಿಟ್ಟ ಮಡದಿಯ ಮಾತು.
ಉಳಿಯಲಿಲ್ಲ ವೀರ ಸೈನಿಕ
ಮಣ್ಣಿನಲ್ಲಿ ಹೂತೆವು
ಪುಟ್ಟ ಮಗುವಿಗೆ ಅರಿವು ಬಾರದು
ಅಪ್ಪ ಸತ್ತ ಶೋಕವು
ಬಳೆಗಳ ಒಡೆದರು ಕಿತ್ತು ಕುಂಕುಮ
ವಿಧವೆಯಾದಳು ವೀರ ಮಡದಿ
ಏಕೆ ಬೇಕು ಸಮರ ಯುದ್ಧ
ವಿಶ್ವ ಶಾಂತಿಗೆ ಸಿದ್ಧವು
———————————
ಡಾ .ಶಶಿಕಾಂತ.ಪಟ್ಟಣ.ಪೂನಾ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group