ಒಂದಿಷ್ಟು ಹನಿಗವನಗಳು

Must Read

ಒಂದಿಷ್ಟು ಹನಿಗಳು.

೧. ಇತಿಹಾಸದಲ್ಲಿ ತಲೆ
ಸವರಿದ ಆ ಖಡ್ಗಕ್ಕೆ
ಹರಾಜಿನಲ್ಲಿ ಬಾರಿ ಬೆಲೆ..!

೨. ಮಠದೊಳಗೆ
ಕಟ್ಟುಮಸ್ತಾಗಿದ್ದ ಅಸಾಮಿ
ಟಿವಿಯಲ್ಲಿ ಬೆತ್ತಲಾದನು

೩. ಡೊನೇಷನ್ ಶಾಲೆಗೆ
ಅಕ್ಕ ಶಾರದೆ ಇಟ್ಟ
ಹೆಸರು ಸುಲಿಗೆ..!

೪. ಜೀವಕ್ಕೆ ಬೆಲೆ ಕಟ್ಟುವ ವೈದ್ಯರು
ಪ್ರಸಿದ್ಧರು ಒಪ್ಪಬಹುದು
ಆದರೆ ವ್ಯಾಪಾರಿ
ಮನೋಧರ್ಮ..!

೫. ಕಲ್ಲನ್ನು ಶಿಲ್ಪಿ

ಕೆತ್ತಿದರೆ ಕಲೆ
ಕಲ್ಲಿನಿಂದ ಶಿಲ್ಪಿ
ಕೆತ್ತಿದರೆ ಕೊಲೆ ..!

೬. ದೋಣಿ ಮೇಲೆ ನೀರಿನಲ್ಲಿ
ವಿಹರಿಸಿದರೆ ವಿಹಾರ
ದೋಣಿ ಒಳಗೆ ನೀರು
ಹರಿದರೆ ಯಾವ ಪರಿಹಾರ..?

ಗೊರೂರು ಅನಂತರಾಜು, ಹಾಸನ.
ಮೊಬೈಲ್: ೯೪೪೯೪೬೨೮೭೯.

Latest News

ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ

ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...

More Articles Like This

error: Content is protected !!
Join WhatsApp Group