spot_img
spot_img

ಕವನ : ಸಂಭ್ರಮ

Must Read

spot_img
- Advertisement -

ಸಂಭ್ರಮ
_________________

ನೀಲಾಕಾಶವ ಮುತ್ತಿಕುವ
ಭರದಲ್ಲಿ ಹಾರುವ ಗಾಳಿಪಟ.
ಎಷ್ಟು ನಯನಮನೋಹರ..
ಬಾಲ್ಯದ ಸವಿ ನೆನಪುಗಳ
ಸಂಭ್ರಮ ಹಸಿರಾಗಿಸಿ..

ಹಗಲಲ್ಲಿ ಬಾನನ್ನು ಚುಕ್ಕಿಯಂತೆ
ಎಲ್ಲ ಬಣ್ಣಗಳಿಂದ ಅಲಂಕರಿಸಿ.
ನೇಸರನ,ತವರೂರಿನವನಾ?..
ಆತನಿಗೂ ನಿನಗೂ ನೆಂಟಸ್ತಿಕೆ ಏನೋ..

- Advertisement -

ಅದೆಷ್ಟು ರಭಸದೀ ಬಾನೆತ್ತರಕ್ಕೆ
ಜಿಗಿದಂತೆ ನೀನಾಗುವೆ ವಿನಯ..
ಇಂಥ ಸಾರವನರಿಯುವಲ್ಲೀ
ಮನುಜನೇಕೆ ಸೋತ ಕಾಣೆ

ಕಾಮನಬಿಲ್ಲಿನೊಂದಿಗೆ,ಅದೃಶ್ಯ
ಚುಕ್ಕಿಗಳೊಂದಿಗೆ ನಿನ್ನ ಪಯಣ
ಚಿಣ್ಣರ ಮುಗುಳು ನಗೆ..
ನೀಲ ನಭದಿ ನಿನ್ನ ಸೊಗಸಿನ ತಾಣ

ಗಾಳಿಪಟದ ಹಾರಾಟದಂತೆ
ಈ ಬದುಕಿನ ಆಟ.
ಆಡಿಸುವಾತನ ಕೈ ಸೋಲುವವರೆಗೂ
ನಮ್ಮ ಹೋರಾಟ..
ಬಾನಲ್ಲಿ ರೆಕ್ಕೆ ಬಿಚ್ಚಿ ಹಾರುವಾಗ,
ಕನಸ್ಸು ನನಸಾದಂತೆ,
ಅದೇನೋ ಸಂಭ್ರಮ..ಸೊಗಸು
ಅದುವೇ ನಮ್ಮ ಬದುಕಿನ ಸಾರ್ಥಕತೆ..
ಬಸವ, ನಮ್ಮೆಲ್ಲರ ಸಾಧನೆಯನ್ನು
ರಂಗಿನ ಗಾಳಿಪಟವನ್ನಾಗಿಸಲಿ.

- Advertisement -

ಮನುಜ ತಾ ಸಾಧನೆಯ
ಶಿಖರವೇರಿದರೂ
ಸೃಷ್ಟಿ ಕರ್ತನ ಮುಂದೆ
ನಾವೆಲ್ಲ ಅದೆಷ್ಟು ಸಣ್ಣವರು.
ಇದೇ ಅಲ್ವೇ ನೀ ಹಾರುತ
ಹೇಳಲು ಯತ್ನಿಸುವ ನೀತಿ ಪಾಠ..
ಇದನರಿತವರ ಬಾಳೆ ಅಂದದ
ಸೊಬಗಿನ ಹೂದೋಟ.
_________________________
ಡಾ ಶಾರದಾಮಣಿ ಹುನಶಾಳ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೀದರನಲ್ಲಿ ಲೋಕಾಯುಕ್ತ ದಾಳಿ

ಬೀದರ : ಗಡಿ ಜಿಲ್ಲೆ ಬೀದರ ನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು ಹೆದ್ದಾರಿ ಅಭಿವೃದ್ಧಿ ಇಲಾಖೆಯ ಮುಖ್ಯ ಯೋಜನಾಧಿಕಾರಿ ಲೋಕೋಪಯೋಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group