Homeಸುದ್ದಿಗಳುಗ್ರಾಮೀಣ ಜನರ ಅನುಕೂಲಕ್ಕೆಂದು ಕಲ್ಯಾಣ ಮಂಟಪ ನಿರ್ಮಾಣ

ಗ್ರಾಮೀಣ ಜನರ ಅನುಕೂಲಕ್ಕೆಂದು ಕಲ್ಯಾಣ ಮಂಟಪ ನಿರ್ಮಾಣ

ಬೀದರ – ಗ್ರಾಮೀಣ ಭಾಗದ ಬಡಜನರಿಗೆ ಅನುಕೂಲವಾಗಲಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಔರಾದ್ ಸಿರ್ಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಕಲ್ಯಾಣ ಮಂಟಪವನ್ನು ಶಾಸಕ ಶೈಲೇಂದ್ರ ಬೇಲ್ದಾಳೆ ಲೋಕಾರ್ಪಣೆಗೊಳಿಸಿದರು.

ಬಡಜನರು ಮದುವೆ ಸೇರಿದಂತೆ ಹಲವು ಕಾರ್ಯಕ್ರಮ ಮಾಡಲು ಲಕ್ಷಾಂತರ ವೆಚ್ಚ ವ್ಯಯಿಸಲಾಗುತ್ತಿದೆ. ಇದರಿಂದ ಬಡಜನರಿಗೆ ಆರ್ಥಿಕ ಹೊರೆ ಆಗುತ್ತಿದ್ದು, ಜನರಿಗೆ ಆರ್ಥಿಕ‌ ಹೊರೆ ತಪ್ಪಿಸಲು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಶಾಸಕ ಶೈಲೇಂದ್ರ ಬೇಲ್ದಾಳೆ ತಿಳಿಸಿದರು.

ಜೊತೆಗೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಕಲ್ಯಾಣ ಮಂಟಪ ನಿರ್ಮಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದೆ. ಮಾತಿನಂತೆ ಈಗ ಕ್ಷೇತ್ರದಲ್ಲಿ 12 ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ ಔರಾದ್ ಸಿರ್ಸಿ ಹಾಗೂ ಕರಕನಳ್ಳಿ ಗ್ರಾಮದಲ್ಲಿ ಕಾಮಗಾರಿ ಮುಕ್ತಾಯಗೊಂಡಿದೆ. ಈ ಕಲ್ಯಾಣ ಮಂಟಪದ ಮೂಲಕ ಬಡಜನರು 5-10 ಸಾವಿರ ಹಣದಲ್ಲಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಕಾರ್ಯಕ್ರಮ ಮಾಡಿಕೊಳ್ಳಬಹುದು ಮುಂದೆ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಕಲ್ಯಾಣ ಮಂಟಪ ನಿರ್ಮಿಸಲಾಗುವುದು ಎಂದು ಶಾಸಕ ಬೇಲ್ದಾಳೆ ಹೇಳಿದರು.

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group