ಕ್ರಾಂತಿ ಜ್ಯೋತಿ ಮಹಾತ್ಮಾ ಫುಲೆ ೧೯೮ ನೇ ಜಯಂತ್ಯುತ್ಸವ

Must Read

ಹಳ್ಳೂರ – ಆಧುನಿಕ ಭಾರತದ ಸಾಮಾಜಿಕ ಕ್ರಾಂತಿಯ ಮೂಲ ಪುರುಷರಲ್ಲಿ ಪ್ರಮುಖರು ಸಮಾಜ ಸುಧಾರಕರು, ಸಮಾನತೆಯ ಹರಿಕಾರರು ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಭಾ ಪುಲೆ ಅವರ 198ನೇ ಜಯಂತ್ಯುತ್ಸವವನ್ನು ಗ್ರಾಮದ ತೋಟಗೇರ ದೈವದ ಆವರಣದಲ್ಲಿ ಆಚರಣೆಯನ್ನು ಮಾಡಲಾಯಿತು.

ಪ್ರಾರಂಭದಲ್ಲಿ ಮಹಾತ್ಮ ಜ್ಯೋತಿಭಾ ಪುಲೆ ಅವರ ಭಾವ ಚಿತ್ರಕ್ಕೆ ಅರ್ಚಕರಾದ ಪಾವಡೆಪ್ಪ ಪೂಜೇರಿ ಅವರು ಪೂಜೆ ನೆರವೇರಿಸಿದರು.

ಈ ಸಮಯದಲ್ಲಿ ಶಾಂತಯ್ಯ ಹಿರೇಮಠ, ಅಯ್ಯಪ್ಪ ಹಿರೇಮಠ, ಯಮನಪ್ಪ ನಿಡೋಣಿ, ಸಿದ್ದಪ್ಪ ಕುಲಿಗೋಡ,  ಭೀಮಪ್ಪ ಹೊಸಟ್ಟಿ, ಮುರಿಗೆಪ್ಪ ಮಾಲಗಾರ, ದುಂಡಪ್ಪ ಕುಲಿಗೋಡ, ಭೀಮಪ್ಪ ಸಪ್ತಸಾಗರ, ಶ್ರೀಶೈಲ ಡಬ್ಬನವರ, ಡಾ ಪಂಡಿತ ಉಪಾದ್ಯೆ, ಬಸವರಾಜ ಕೌಜಲಗಿ, ಬಾಳಗೌಡ ನಾಯ್ಕ, ಮುತ್ತು ಹೊಸಟ್ಟಿ ಸೇರಿದಂತೆ ಅನೇಕರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group