ಕವನ : ಬೆಲೆಯಿಲ್ಲ ಭಾವನೆಗೆ

Must Read

ಬೆಲೆಯಿಲ್ಲ ಭಾವನೆಗೆ

ಭಾವನೆಗಳಿಗೆ ಬೆಲೆ ಇಲ್ಲ ಮನುಜ
ಮೋಹದ ಬಲೆ ಸಹಜ
ಕೊಟ್ಟು ತೆಗೆದು ಕೊಳ್ಳುವ ಇರಾದೆಯಲಿ
ಒಗ್ಗಟ್ಟು ಬರೀ ನೆಪದ ತೆರದಲಿ.

ನಾನೆಂಬ ಗರಿ ಮೂಡಿ
ನೀನೆಂಬ ಭೇದ ಹರಡಿ
ಬೆನ್ನಿಗೆ ಚೂರಿ ಹಾಕುವ ಹುನ್ನಾರ
ಚೆನ್ನಿಗನ ಮಾತಂತೆ ಬಿಡಾರ.

ಹೊದಿಕೆಗೆ ಹೂಡಿಕೆ ಮಾಡಿ
ಒಳ ಮರ್ಮ ತಿಳಿಯದೆ ತಡಕಾಡಿ
ಗಾಳಕ್ಕೆ ಸಿಕ್ಕ ಮೀನು
ಕಲಿಗಾಲದ ಬಳುವಳಿ ನೀನು.

ಸಂಪತ್ತಿನ ನಶೆಗೆ
ವಿಪತ್ತು ಆಹ್ವಾನಿಸಿದ ಬಗೆಗೆ
ವಿಷಪ್ರಾಶನವಾದ ಆಹಾರ
ಮೋಸದ ಜಾಲಕೆ ಆಕರ.

ಡಂಭಾಚಾರದ ಬದುಕಿಗೆ
ಮಾನವೀಯತೆ ತೆರೆ ಮರೆಗೆ
ಸ್ವೇಚ್ಛಾಚಾರದ ನಡೆ
ಅತಿಮಾನುಷ ಕಡೆ

ಏನೆನ್ನಲಿ ಈ ಬದುಕಿಗೆ
ಒಟ್ಟಿಗಿದ್ದು ದೂರ ನಿಲ್ಲುವೆವು
ಒಳಗೊಳಗೆ ಕೊರೆವ ಕೀಟದ ಹಾವಳಿಗೆ
ನಲುಗಿ ಹೋಗಿದೆ ಜೀವ ಯಾನ.

ಕೊನೆಗೊಮ್ಮೆ ತಿಳಿಯುವ ಮೊದಲೇ
ಹೊರಡುವ ಧಾವಂತ
ಹೇಳದೇ ಕೇಳದೇ ಇದ್ದರೂ
ಮೆರೆದ ಬದುಕು ಛಿದ್ರ ಛಿದ್ರ.

ಬಯಲಾಟದ ಬದುಕು
ಗೋಳಾಟದ ಹಾದಿಯಲಿ
ಕಳ್ಳಾಟ ಮಲ್ಲಾಟ ಸೋಜಿಗ
ತಳ್ಳಾಟದಿ ಕೆನೆಗೊಳ್ಳುವ ಭೋಗ.

ಭಾವನೆಗಳಿಗೆ ಬೆಲೆಯಿಲ್ಲ
ಚುಚ್ಚಿ ನೆತ್ತರನ್ನು ಬರಿಸಿ
ಮುಚ್ಚಿ ಮುಚ್ಚಿ ಮಿಸುಕಾಡಿ
ಜೀವದೊಡಲಿಗೆ ಕುತ್ತು ಬಂದಿದೆ.

ತಿಳಿಯೊಮ್ಮೆ ಭಾವನೆಗಳೇ ಬದುಕು
ಇದ್ದಾಗ ಬೆಲೆ ಕೊಡಿ
ಹೋದಾಗ ಮರುಗದೆ
ಕೊರಗುವ ಮುನ್ನ .ಎಚ್ಚೆತ್ತುಕೊಳ್ಳಿ.

ರೇಷ್ಮಾ ಕಂದಕೂರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group