ಕವನ : ಶಿವನೆದೆಯಲ್ಲಿ ಸಂಲಗ್ನವಾಗುವೆ

Must Read

ಶಿವನೆದೆಯಲ್ಲಿ ಸಂಲಗ್ನವಾಗುವೆ

ಸಿಂಧು ಗಂಭೀರ ಬೇಕೆನ್ನ ಬಾಳಿಗೆ
ಸಾಗು ಮನವೆ ಮಹಾಶರಣನಂತೆ
ಶುದ್ಧನಾಗು ಬುದ್ಧದೇವನಂತೆ
ಎಳೆಗರುವ ನೆನೆದೋಡುವ
ತುರುವಾತುರವಿರಲಿ
ಬಾಳ ಗೆಲ್ಲುವೆನೆಂಬ ಧೈರ್ಯವಿರಲಿ
ಜೀವ ಕೃತಿ ಮುಗಿಸುವ ಹುಚ್ಚಿರಲಿ
ಭಾವ ಬೆಟ್ಟಕ್ಕೆ ಜಿಗಿವ ಕೆಚ್ಚಿರಲಿ
ಬಾಳ ಪಯಣದಲಿ ನೊರೆಂಟು ತೊಡಕಿದ್ದರೂ ಸ್ವಾಗತಿಸುವೆ
ನದಿಯಂತೆ ಹರಿದೆಲ್ಲವನು ದಾಟುವೆ
ಸಾರಸ್ವತ ಸಾಗರದಾಲಿಂಗನದಲ್ಲಿ ನನ್ನನ್ನೆ ಮರೆತು ಸೌಮ್ಯವಾಗುವೆ!
ಯೋಗ ಬುದ್ಧನಾಗಿ, ಶಾಂತಿ ಬೋಗಿಯಾಗಿ ವಿಶ್ರಾಂತಿ ಉಯ್ಯಾಲೆಯಲ್ಲಿ ತೂಗಿ ತೊನೆವೆ
ಅದೃಶ್ಯ ಪರ್ವತದ ಶಿವನೆದೆಯಲ್ಲಿ ಸಂಲಗ್ನವಾಗುವೆ.

 

ಎಸ್.ಎಸ್.ಪುಟ್ಟೇಗೌಡ,
ಮೈಸೂರು
ಮೊ 9972242091

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group