ಶಿವನೆದೆಯಲ್ಲಿ ಸಂಲಗ್ನವಾಗುವೆ
ಸಿಂಧು ಗಂಭೀರ ಬೇಕೆನ್ನ ಬಾಳಿಗೆ
ಸಾಗು ಮನವೆ ಮಹಾಶರಣನಂತೆ
ಶುದ್ಧನಾಗು ಬುದ್ಧದೇವನಂತೆ
ಎಳೆಗರುವ ನೆನೆದೋಡುವ
ತುರುವಾತುರವಿರಲಿ
ಬಾಳ ಗೆಲ್ಲುವೆನೆಂಬ ಧೈರ್ಯವಿರಲಿ
ಜೀವ ಕೃತಿ ಮುಗಿಸುವ ಹುಚ್ಚಿರಲಿ
ಭಾವ ಬೆಟ್ಟಕ್ಕೆ ಜಿಗಿವ ಕೆಚ್ಚಿರಲಿ
ಬಾಳ ಪಯಣದಲಿ ನೊರೆಂಟು ತೊಡಕಿದ್ದರೂ ಸ್ವಾಗತಿಸುವೆ
ನದಿಯಂತೆ ಹರಿದೆಲ್ಲವನು ದಾಟುವೆ
ಸಾರಸ್ವತ ಸಾಗರದಾಲಿಂಗನದಲ್ಲಿ ನನ್ನನ್ನೆ ಮರೆತು ಸೌಮ್ಯವಾಗುವೆ!
ಯೋಗ ಬುದ್ಧನಾಗಿ, ಶಾಂತಿ ಬೋಗಿಯಾಗಿ ವಿಶ್ರಾಂತಿ ಉಯ್ಯಾಲೆಯಲ್ಲಿ ತೂಗಿ ತೊನೆವೆ
ಅದೃಶ್ಯ ಪರ್ವತದ ಶಿವನೆದೆಯಲ್ಲಿ ಸಂಲಗ್ನವಾಗುವೆ.
ಎಸ್.ಎಸ್.ಪುಟ್ಟೇಗೌಡ,
ಮೈಸೂರು
ಮೊ 9972242091