ಸಾಮೂಹಿಕ ಪ್ರಾರ್ಥನೆ ಹಾಗೂ ವಚನ ವಿಶ್ಲೇಷಣೆ ಕಾರ್ಯಕ್ರಮ

Must Read

ಬೆಳಗಾವಿ – ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.30.04.2025 ರಂದು ಬಸವೇಶ್ವರ ಜಯಂತಿ, ಸಾಮೂಹಿಕ ಪ್ರಾಥ೯ನೆ ವಚನ ವಿಶ್ಲೇಷಣೆ ಜರುಗಿತು.

ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ದರು. ಜಗತ್ತಿಗೆ ಶಾಂತಿ ಅವಶ್ಯಕ,ಬಸವೇಶ್ವರರು ಹಾಕಿದ ಮಾಗ೯ದಲ್ಲಿ ನಾವೆಲ್ಲಾ ಸಾಗೋಣ. ನಾವೆಲ್ಲರು ಒಂದು ಎಂದು ಸಾಗೋಣ. ಬಿಳಿ ಅತ್ಯಂತ ತಿಳಿ ಬಣ್ಣವಾಗಿದೆ ಮತ್ತು ವಣ೯ರಹಿತವಾಗಿದೆ ಏಕೆಂದರೆ ಅದು ಬೆಳಕಿನ ಎಲ್ಲ ಗೋಚರವಿರುವ ತರಂಗಾಂತರಗಳನ್ನು ಸಂಪೂಣ೯ವಾಗಿ ಪ್ರತಿಫಲಿಸುತ್ತದೆ ಮತ್ತು ಚೆದುರಿಸುತ್ತದೆ. ಬಸವ ಜಯಂತಿಯಂದು ಬಿಳಿ ಬಟ್ಟೆ ಧರಿಸೋಣ ಎಂದು ನುಡಿದರು.

ಪ್ರಾರಂಭದಲ್ಲಿ ಶರಣೆ ಮಹಾದೇವಿ ಅರಳಿ, ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು, ಸುಜಾತಾ ಮತ್ತಿ ಕಟ್ಟಿ , ಅನಸೂಯಾ ಬಶೆಟ್ಟಿ, ಸುವರ್ಣ ಗುಡಸ,ಅನೀತಾ ಚೆಟ್ಟರ, ಶೋಭಾ ದೇಯನ್ನವರ,ಶ್ರೀದೇವಿ ನರಗುಂದ,ಶಾಂತಾ ಕ೦ಬಿ,ವಿದ್ಯಾ ಕಕಿ೯, ಶಿವಾನಂದ ಗ೦ಗಣ್ಣವರ, ವಿಜಯ ಹುದಲಿಮಠ, ಅಶೋಕ ಇಟಗಿ,ಶ೦ಕರ ಗುಡಸ, ಸುರೇಶ ನರಗುಂದ, ಆನಂದ ಕಕಿ೯, ಪ್ರಸಾದ ಹಿರೇಮಠ, ಜಾಬಗೌಡರ ಸರ್ ,ಪ್ರೇಮ ಚೌಗಲೆ, ಮಹಾತೇಂಶ ಮೆಣಸಿನಕಾಯಿ, ಶಿವಾನಂದ ನಾಯಕ, ಗುರುಸಿದ್ದಪ್ಪ ರೇವಣ್ಣವರ, ಸುನೀಲ ಸಾಣಿಕೊಪ್ಪ , ಸೋಮಶೇಖರ ಕಟ್ಟಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿ ವಂದಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group