ಕವನ : ಬದುಕಲು ಬಿಡಿ ನನ್ನ

Must Read

ಬದುಕಲು ಬಿಡಿ ನನ್ನ

ಅರಳಿ ನಗುವ ಹೂವಿನಂತೆ
ಹೆಣ್ಣು ತಾ ಬೆಳೆಯುವಳು
ಹೆತ್ತ ಮನೆಗೆ , ಕಾಲಿಟ್ಟ ಮನೆಗೆ
ಕೀರ್ತಿ ಹೊತ್ತು ತರುವಳು.

ಮಮತಾ ಮೂರ್ತಿ ತಾಯಾಗಿ
ಮಡಿಲ ತುಂಬಿ ನಗುವಳು
ಮಾನಿನಿಯು ತಾನಾಗಿ
ಮನೆಯ ದೀಪ ಬೆಳಗುವಳು.

ಹೆಣ್ಣು ಜಗದ ಕಣ್ಣೆಂದು
ಹೇಳಿದರು ಮಹಾತ್ಮರು
ಹೆಣ್ಣು ಭೋಗದ ವಸ್ತುವೆಂದು
ಕಂಡರು ಕೆಲ ದುರುಳರು.

ವಿಕೃತ ಕಾಮದ ಕಣ್ಣಿಗೆ
ಕಾಣುವುದೆಲ್ಲ ಬೆತ್ತಲೆ
ರಕ್ಕಸತನ ತೋರುವರು
ಅವರಲ್ಲಿ ಇಲ್ಲ ಕರುಣೆ.

ಮನದ ಆಸೆ ತೀರಿಸಿಕೊಳ್ಳಲು
ಎಳೆದು ನಿನ್ನ ಹೊತ್ತರು
ದಾಹ ತೀರೆ ಅಲ್ಲೇ ನಿನ್ನ
ಕೊಳ್ಳಿ ಇಟ್ಟು ಕೊಂದರು.

ತುಂಬಿದ ಯೌವನವೆ
ಮುಳುವಾಯಿತೇ ಜೀವಕ್ಕೆ
ಜೀವದ ಬೆಲೆ ಏನು ಗೊತ್ತು
ಕಾಮಾಂಧ ಸಮಾಜಕ್ಕೆ.

ಅಬಲೆ ಎಂದು ಹೆಣ್ಣಿಗೆ
ಕಾಮ ಬಲೆಯ ಬೀಸದಿರಿ
ಅವಳಿಗೂ ಜೀವವಿದೆ
ಎನ್ನುವುದ ನೀವು ಅರಿಯಿರಿ.

       ✍️ ಡಾ. ಮಹೇಂದ್ರ ಕುರ್ಡಿ, ಗಂಗಾವತಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group