ಕವನ : ಸ್ವಾತಂತ್ರ್ಯದ ಕಲಿಗಳು 

Must Read

ಸ್ವಾತಂತ್ರ್ಯದ ಕಲಿಗಳು

ಸ್ವಾರ್ಥತೆಯ ಮರೆತು
ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಮಾಡಿ
ಜೀವದ ಹಂಗು ತೊರೆದು ಹೋರಾಡಿ
ಸ್ವಾತಂತ್ರ್ಯ ಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು

ಸ್ವಚ್ಚಂದದ ಸ್ವಂತಿಕೆಯ ತೊರೆದು
ಲಫಂಗರ ಲಾಠಿ ಏಟು ತಿಂದು
ಲೋಕಕ್ಕೆಲ್ಲ ವೀರಾಧಿ ವೀರರಾಗಿ
ಸ್ವಾತಂತ್ರ್ಯ ಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು

ಬೂಟಾಟಿಕೆಯ ಮಾತು ಬಿಟ್ಟು
ಬ್ರಿಟಿಷರ ಬೂಟಿನಡಿ ನಲುಗಿ
ಒದೆ ತಿಂದು ಬಾಗುತ ಬೀಗುತ
ಭವ್ಯ ಭಾರತ ಕಟ್ಟಿದವರು
ಅವರೇ ನಮ್ಮ ಭಾರತದ ಕಲಿಗಳು

ಹತ್ಯಾಕಾಂಡಕೆ ಹೆದರದೆ ಬೆದರದೆ
ಸ್ವಾಭಿಮಾನದಿ ಮನೆ ಮಠ ಬಿಟ್ಟು
ಹಠದಿಂದ ದಿಟವಾಗಿ ಧೈರ್ಯದಿ
ಸ್ವಾತಂತ್ರ್ಯಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು

ಚಳಿ -ಮಳೆ ಬಿರುಗಾಳಿ ಎನ್ನದೆ
ಚಳವಳಿಯ ಹಾದಿ ಹಿಡಿದು ಕೇಕೆ ಹಾಕಿ
ಕೆಂಪು ಮೋತಿಯವರಿಗೆ ಬೆದರದೆ
ಜಬರದಸ್ತ್ ಜೈ ಕಾರ ಹಾಕಿ
ಸ್ವಾತಂತ್ರ್ಯ ಗಳಿಸಿ ಕೊಟ್ಟವರು
ಅವರೇ ನಮ್ಮ ಭಾರತದ ಕಲಿಗಳು

ಬ್ರಿಟಿಷರ ತುಪಾಕಿಯ ತುದಿಗೆ
ಎದೆಗುಂದದೇ ಎದೆಯೊಡ್ಡಿ
ಭಾರತ ಮಾತೆಗೆ ನೆತ್ತರುಣಿಸಿ
ನವ ಭಾರತವನ್ನು ಕಟ್ಟಿದವರು
ಅವರೇ ನಮ್ಮ ಭಾರತದ ಕಲಿಗಳು

ಸ್ವಾತಂತ್ರ್ಯ ಸಿಕ್ಕಿತು ದಕ್ಕಿತೆಂದು
ಸೋಗಿನಲಿ ಬೀಗುವುದು ಬೇಡ
ಇನ್ನು ನಮ್ಮ ಮುಂದೆ ಬೆಟ್ಟದಷ್ಟು
ಸಾವಿರ ಸಾವಿರ ಸವಾಲುಗಳಿವೆ
ಒಂದಾಗಿ, ಚೆಂದಾಗಿ ಸವಾಲುಗಳನು
ಸ್ವೀಕರಿಸಿ ಬಗೆಹರಿಸಿಕೊಳ್ಳೋಣ
ಸ್ವೀಕರಿಸಿ ಬಗೆಹರಿಸಿಕೊಳ್ಳೋಣ

 

ಅಶೋಕ ಅರ್ಕಸಾಲಿ ನಿವೃತ್ತ ಶಿಕ್ಷಕರು
ತಾ:– ಹೂವಿನ ಹಡಗಲಿ
ಜಿ:– ಬಳ್ಳಾರಿ

೯೯೪೫೪೯೮೯೧೯

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group