Homeಕವನಕವನ : ವಸುಮತಿ ಕಂದ ಹೇ ಮುಕುಂದ

ಕವನ : ವಸುಮತಿ ಕಂದ ಹೇ ಮುಕುಂದ

spot_img

ವಸುಮತಿ ಕಂದ ಹೇ ಮುಕುಂದ

ನಂದನಕಂದ ಕೃಷ್ಣ ಮುಕುಂದ
ಬಂದನು ಹುಟ್ಟಿ ಧರೆಯೊಳಗೆ
ಅಂದಿನ ಇರುಳೇ ಕಂದನ ಅಡಗಿಸಿ
ತಂದನು ತಂದೆಯು ಗೋಕುಲಕೆ

ಅಷ್ಟಮಿ ದಿನವೇ ಜನಿಸಿದ ಶಿಶುವ
ಬುಟ್ಟಿಯೊಳಿರಿಸಿ ಹೊರ ನಡೆದ
ದುಷ್ಟ ಕಂಸನು ಕೊಂದೇ ಬಿಡುವನು
ಅಷ್ಟಮ ಮಗುವಿದು ತಿಳಿದರೆ ಎಂದ

ಅಂಧಕಾರದಲಿ ಭರದಿ ಸುರಿವ ಮಳೆ
ಮಗುವದು ನೆನೆಯುವುದೆನ್ನುತಲಿ
ಮುಂದಕೆ ಬಂದು ಹೆಡೆಯನು ಬಿಚ್ಚಿ
ಕೊಡೆಯಾದನಮ್ಮ ಆದಿಶೇಷ!!

ಪುಟ್ಟ ಪುಟ್ಟ ಪಾದವ ಬಡಿಯುತಲಿ
ಆಟಕೆ ಬಿದ್ದನಪ್ಪ ಮುದ್ದು ಕಂದ
‌ಹೊಟ್ಟೆತನಕ ಬಂದ ನೀರ ಲೆಕ್ಕಿಸದೆ
ಮುಟ್ಟಿಸಿದನ್ವಸುದೇವ ಗೋಕುಲಕೆ

ನಂದನ ಮಗಳನು ಚೆಂದದಿ ಸುತ್ತಿ
ದೇವಕಿ ಮಡಿಲಿಗೆ ಒಪ್ಪಿಸಲು
ಆತುರದಿ ಮಾವ ಲಕ್ಷ್ಮೀಯವತಾರವ
ಎಸೆಯಲು ಜೈಲಿನ ಚಾವಣಿಗೆ

ಅಶರೀರವಾಣಿ ಮೊಳಗಿತು ಮೆಲ್ಲ
ನಿನ್ನ ಕೊಲುವವನು ಈ ಮಗು ಅಲ್ಲ
ಗೋಕುಲದಲಿ ಇರುವನು ಎಂದ
ಅವನೇ ಜನಾರ್ದನ ಮುಕುಂದ

ಹರೇ ಕೃಷ್ಣ ಹರೇ ಎನ್ನಿ ಭಕ್ತಿಯಿಂದ
ಒಲಿಯುವ ಭಕ್ತಿಗೆ ದೇವಕಿ ಕಂದ.

✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.

RELATED ARTICLES

Most Popular

error: Content is protected !!
Join WhatsApp Group