ಕವನ : ವಸುಮತಿ ಕಂದ ಹೇ ಮುಕುಂದ

Must Read

ವಸುಮತಿ ಕಂದ ಹೇ ಮುಕುಂದ

ನಂದನಕಂದ ಕೃಷ್ಣ ಮುಕುಂದ
ಬಂದನು ಹುಟ್ಟಿ ಧರೆಯೊಳಗೆ
ಅಂದಿನ ಇರುಳೇ ಕಂದನ ಅಡಗಿಸಿ
ತಂದನು ತಂದೆಯು ಗೋಕುಲಕೆ

ಅಷ್ಟಮಿ ದಿನವೇ ಜನಿಸಿದ ಶಿಶುವ
ಬುಟ್ಟಿಯೊಳಿರಿಸಿ ಹೊರ ನಡೆದ
ದುಷ್ಟ ಕಂಸನು ಕೊಂದೇ ಬಿಡುವನು
ಅಷ್ಟಮ ಮಗುವಿದು ತಿಳಿದರೆ ಎಂದ

ಅಂಧಕಾರದಲಿ ಭರದಿ ಸುರಿವ ಮಳೆ
ಮಗುವದು ನೆನೆಯುವುದೆನ್ನುತಲಿ
ಮುಂದಕೆ ಬಂದು ಹೆಡೆಯನು ಬಿಚ್ಚಿ
ಕೊಡೆಯಾದನಮ್ಮ ಆದಿಶೇಷ!!

ಪುಟ್ಟ ಪುಟ್ಟ ಪಾದವ ಬಡಿಯುತಲಿ
ಆಟಕೆ ಬಿದ್ದನಪ್ಪ ಮುದ್ದು ಕಂದ
‌ಹೊಟ್ಟೆತನಕ ಬಂದ ನೀರ ಲೆಕ್ಕಿಸದೆ
ಮುಟ್ಟಿಸಿದನ್ವಸುದೇವ ಗೋಕುಲಕೆ

ನಂದನ ಮಗಳನು ಚೆಂದದಿ ಸುತ್ತಿ
ದೇವಕಿ ಮಡಿಲಿಗೆ ಒಪ್ಪಿಸಲು
ಆತುರದಿ ಮಾವ ಲಕ್ಷ್ಮೀಯವತಾರವ
ಎಸೆಯಲು ಜೈಲಿನ ಚಾವಣಿಗೆ

ಅಶರೀರವಾಣಿ ಮೊಳಗಿತು ಮೆಲ್ಲ
ನಿನ್ನ ಕೊಲುವವನು ಈ ಮಗು ಅಲ್ಲ
ಗೋಕುಲದಲಿ ಇರುವನು ಎಂದ
ಅವನೇ ಜನಾರ್ದನ ಮುಕುಂದ

ಹರೇ ಕೃಷ್ಣ ಹರೇ ಎನ್ನಿ ಭಕ್ತಿಯಿಂದ
ಒಲಿಯುವ ಭಕ್ತಿಗೆ ದೇವಕಿ ಕಂದ.

✍️ ಶ್ರೀಮತಿ ಕಮಲಾಕ್ಷಿ ಕೌಜಲಗಿ
ಬೆಂಗಳೂರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group