ಕವನ : ಬರಿದಾದ ಒಡಲು

Must Read

ಬರಿದಾದ ಒಡಲು

‌ಕಿಲಕಿಲ ನಗುವ ಸದ್ದಿಲ್ಲ
ಪುಟ್ಟ ಕರಗಳ ಸ್ಪರ್ಶವಿಲ್ಲ
ಮಡಿಲಲ್ಲಿ ಕಂದನು ಮಲಗಿಲ್ಲ
ಮೈ ಮನಕೆ ಹರ್ಷವಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲು

ಕೆಮ್ಮಣ್ಣು ತಿನ್ನುವ ಯೋಗವಿಲ್ಲ
ಮಾವಿನಕಾಯಿ ಮೆಲ್ಲುವ ಅದೃಷ್ಟವಿಲ್ಲ
ದೇಹದಿ ಪರಿವರ್ತನೆ ಇಲ್ಲವೇ ಇಲ್ಲ
ಉದರದಿ ಕಂದನ ಒದ್ದಾಟವಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲು

ಮಗುವಿನ ಅಳುವ ದನಿಯಿಲ್ಲ
ತೊದಲು ನುಡಿಗಳ ಆಲಿಸುವ ಭಾಗ್ಯವಿಲ್ಲ
ಅಂಬೆಗಾಲಿನ ಗೆಜ್ಜೆನಾದದ ಸಂಗೀತವಿಲ್ಲ
ಅಮ್ಮ ಎಂಬ ಅಕ್ಕರೆಯ ಕರೆಯಿಲ್ಲ
ಬರಿದಾಗಿದೆ ಒಡಲು
ಅಂತರಂಗದಿ ಅಳಲು

ಅಟ್ಟದಲ್ಲಿ ತೊಟ್ಟಿಲು ಅಣಕಿಸುತ್ತಿತ್ತ
ಜನರ ಕುಹಕಗಳಿಗೆ ಮನವು ನೊಂದಿತ್ತ
ಮೌನವು ಮನೆಯಲಿ ತಾಂಡವವಾಡಿತ್ತ
ಪತಿಯ ಸಾಂತ್ವನವ ಹೃದಯ ಬಯಸಿತ್ತ
ಬರಿದಾಗಿದೆ ಒಡಲು
ಅಂತರಂಗದಿ ಅಳಲು

ಗೀತಾ ಲೋಕೇಶ್.ಕಲ್ಲೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group