ಬೆಳಗಾವಿ:-ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.07 ರಂದು ಕುರಿತು ಮಾತನಾಡುತ್ತಾ ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು.ಕಲ್ಯಾಣದ ನಿಯಮದಂತೆ ಶರಣನಾದವನು ಮೊದಲು ಕಾಯಕ ಮಾಡಬೇಕು, ಅದರಂತೆ ಮಾದಣ್ಣನ ವರು ತಾವು ಮಾಡುತ್ತಿದ್ದ ಹೂವು ಪತ್ರೆ ಕಾಯಕವನ್ನೇ ಪ್ರತಿದಿನ ಶರಣರ ಲಿಂಗ ಪೂಜೆಗೆ ಹೂವು ಪತ್ರೆಗಳನ್ನು ತಂದು ಕೊಡುವ ಕಾಯಕವನ್ನಾಗಿ ಮಾಡುತ್ತಾರೆ. ಮಾದಣ್ಣನಿಗೆ ಮಹಾದೇವಿ ಮಡದಿಯಾಗಿ ಇವಳು ಹೂ ಕಟ್ಟುವ ಕಾಯಕ ಮಾಡುತ್ತಾರೆ. ಶರಣರ ಜೀವನವು ಹೂ ಇದ್ದಂತೆ ಅದರಂತೆ ಶರಣರಿಂದ ಅರಿವು ಎನ್ನುವ ಮಕರಂದವನ್ನು ಹೀರಿಕೊಂಡು ತಮ್ಮೊಳಗೆ ಇಟ್ಟುಕೊಳ್ಳುತ್ತಾ ಅನುಭವ ಎಂಬ ಜೇನುತುಪ್ಪವನ್ನು ಸವಿದರು ಅನುಭಾವದ ಸುಧೆಯನ್ನು ಹಂಚಿದವರು ಕಲ್ಯಾಣದಲ್ಲಿ ಅರಿವಿನ ಪರಿಮಳವನ್ನು ಸೂಸಿದವರು ಶರಣ ಹೂಗಾರ ಮಾದಯ್ಯನವರು ಎಂದು ಡಾ. ಭವ್ಯಾ ಸಂಪಗಾರ ಹೇಳಿದರು.
ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು ಮಹಾಂತೇಶ ಮೆಣಸಿನಕಾಯಿ ಅವರು ಪರಿಚಯಿಸಿದರು. ಜಯಶ್ರೀ ಚಾವಲಗಿ,ಅಕ್ಕಮಹಾದೇವಿ ತೆಗ್ಗಿ, ವಿ. ಕೆ. ಪಾಟೀಲ,ಬಸವರಾಜ ಬಿಜ್ಜರಗಿ,ಬಿ. ಪಿ. ಜೇವಣಿ,ಸುನೀಲ ಸಾಣಿಕೊಪ್ಪ,ದಾಕ್ಷಾಯಿಣಿ ಪೊಜೇರಿ ಶರಣ ಶರಣೆಯರು ವಚನ ವಿಶ್ಲೇಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಶರಣ ಶಿವಾನಂದ ಹೂಗಾರ ಅತಿಥಿಗಳಾಗಿ ಶರಣ ಲಕ್ಷೀಕಾಂತ ಗುರವ ಆಗಮಿಸಿದ್ದರು. ಶರಣೆ ರುದ್ರಮ್ಮಾ ಅಕ್ಕನವರ ಪ್ರಸಾದ ವ್ಯವಸ್ಥೆ ಮಾಡಿದ್ದರು.ಪ್ರಭು ಹೂಗಾರ,ಮೋಹನ ಹೂಗಾರ, ರಾಜು ಗುರವ ಮಹಾದೇವ ಹೂಗಾರ,ಅಜು೯ನ ಹೂಗಾರ, ಸುಶೀಲಾ ಗುರವ, ಶೇಖರ ವಾಲಿ ಇಟಗಿ,ಶರಣ ಪೂಜೇರಿ, ಗದಿಗೆಪ್ಪ ತಿಗಡಿ, ಬಾಬು ತಿಗಡಿ,ಶಿವಾನಂದ ತಲ್ಲೂರ, ಶಿವಾನಂದ ನಾಯಕ,ಶಂಕರ ಗುಡಸ,ಸದಾಶಿವ ದೇವರಮನಿ,ಜ್ಯೋತಿ ಬದಾಮಿ,ಆನಂದ ಕರಕಿ,ಶರಣ ಕಂಬಾರ,ಗುರುಸಿದ್ದಪ್ಪ ರೇವಣ್ಣನ್ನವರ,ಶ೦ಕ್ರಪ್ಪ ಮೆಣಸಗಿ, ಕಮಲಾ ಗಣಾಚಾರಿ, ಶರಣಶರಣೆಯರು ಉಪಸ್ಥಿತರಿದ್ದರು.
ಇದೇ ಸ೦ದಭ೯ದಲಿೢ ಅನುಭಾವ ನೀಡಿದ ಡಾಕ್ಟರ್ ಸ೦ಪಗಾರ ಹಾಗೂ ಹೂಗಾರ ಸಮಾಜದ ಅಧ್ಯಕ್ಷರಾದ ಶಿವಾನ೦ದ ಹೂಗಾರ ಇವ೯ರಿಗೂ ಸತ್ಕಕರಿಸಲಾಯಿತು ಸುರೇಶ ನರಗುಂದ ನಿರೂಪಿಸಿ ವಂದಿಸಿದರು. ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

