ಬೆಳೆ ವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

Must Read

ಡೋನ್ ಸಮೀಕ್ಷೆ ನಡೆಸಿ, ಸದ್ಯ ಮಧ್ಯಂತರ ಪರಿಹಾರ ನೀಡಲು ರೈತರ ಆಗ್ರಹ

ಹುನಗುಂದ: ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರ ಅತಿವೃಷ್ಟಿ ಸಂಭವಿಸಿ ಸಾವಿರಾರು ಹೆಕ್ಟೇರ ಪ್ರದೇಶದಲ್ಲಿನ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಸರ್ಕಾರ ಬೆಳೆ ಹಾನಿ ಪರಿಹಾರ, ಬೆಳೆ ಸಾಲ ಮನ್ನಾ, ಬೆಳೆ ವಿಮೆಯನ್ನು ತಕ್ಷಣವೇ ಒದಗಿಸುವಂತೆ ಒತ್ತಾಯಿಸಿ ಶನಿವಾರ ಹುನಗುಂದದ ಗಚ್ಚಿನಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಪಟ್ಟಣದ ಗಚ್ಚಿನಮಠದಿಂದ ನೂರಾರು ರೈತ ಮುಖಂಡರ ರ್ಯಾಲಿಯ ಮೂಲಕ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿಕೊಂಡ ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ಅತಿವೃಷ್ಟಿಯಿಂದ ಹಾಳಾಗಿರುವ ರೈತರ ಬೆಳೆಗಳಲ್ಲಿ ಕೇವಲ ತೊಗರಿ ಮತ್ತು ಹೆಸರು ಬೆಳೆಗಳನ್ನು ಮಾತ್ರ ಸಮೀಕ್ಷೆ ಮಾಡಲಾಗುತ್ತಿದ್ದು,ಉಳಿದ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ, ಸೇರಿದಂತೆ ಇತರ ಬೆಳೆಗಳು ಸಮೀಕ್ಷೆ ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸರ್ಕಾರ ನಿರಂತರ ಮಳೆಯಿಂದ ಹಾನಿಗೊಳಗಾದ ಎಲ್ಲ ಬೆಳೆಗಳ ಪೂರ್ಣ ಪ್ರಮಾಣದ ವೈಮಾನಿಕ ಸಮೀಕ್ಷೆಯನ್ನು ಮಾಡಿ, ಪ್ರತಿ ಎಕರೆಗೆ ಹಣವನ್ನು ನಿಗದಿಗೊಳಿಸಿ, ಯೋಗ್ಯ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ರೈತ ಮುಖಂಡ ಮಲ್ಲನಗೌಡ ತುಂಬದ, ಮಾತನಾಡಿ, ನಿರಂತರ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ರೈತರ ಬೆಳೆಗಳು ಹಾನಿಯಾಗಿದ್ದು, ತಕ್ಷಣವೇ ಸರ್ಕಾರ ಬೆಳೆ ಪರಿಹಾರ ಜೊತೆಗೆ ಬೆಳೆ ವಿಮೆಯನ್ನು ನೀಡಬೇಕು. 2024-25ನೇ ಸಾಲಿನ ರೈತರ ಸಾಲವನ್ನು ಮನ್ನಾ ಮಾಡಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಕೂಡಾ ನಮ್ಮನ್ನು ಆಳುವ ಸರ್ಕಾರಗಳು ರೈತರ ಪರವಾದ ಒಂದು ಕಾನೂನುಗಳ ರಚಿಸಲಿಲ್ಲ, ಒಂದು ವಿಶೇಷ ಯೋಜನೆಗಳನ್ನು ತರಲಿಲ್ಲ, ಅತಿವೃಷ್ಟಿ ಅನಾವೃಷ್ಟಿ ಆದಾಗಲೂ ಕೂಡಾ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಗಳು ಸಿಗುತ್ತಿಲ್ಲ, ರೈತ ಕುಲದ ಬಹು ದಿನದ ಬೇಡಿಕೆಯಾದ ಸ್ವಾಮಿನಾಥನ್ ವರದಿ ರಾಜ್ಯದಲ್ಲಿ ಜಾರಿಯಾಗಬೇಕು ರೈತರಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು

ವೇ.ಮೂ. ಮಹಾಂತಯ್ಯ ಗಚ್ಚಿನಮಠ, ಹಿರಿಯ ರೈತ ಮುಖಂಡ ಸಂಗಣ್ಣ ನಾಗರಾಳ, ಬಸಯ್ಯ ಹಿರೇಮಠ, ಮಾಜಿ ಸೈನಿಕ ವೆಂಕಣ್ಣ ಹಗೆದಾಳ ಮಾತನಾಡಿದರು.

ಈ ಸಂದರ್ಭದಲ್ಲಿ ನವ ಕರ್ನಾಟಕ ರಾಜ್ಯ ರೈತ ಸಂಘದ
ಮುಖಂಡ ಇಳಕಲ್ ನ ನಾಗರಾಜ ಹೊಂಗಲ್, ಮಾತನಾಡಿ, ರಾಜ್ಯದ ಮಳೆ ಬಾರದ ಪ್ರದೇಶಕ್ಕೆ ಈ ಬಾರಿ ಕಳೆದ ನಾಲ್ಕು ತಿಂಗಳಿಂದ ದಾಖಲೆ ಮಳೆಯಾಗಿ ಅತಿವೃಷ್ಟಿ ಸಂಭವಿಸಿ ಹುನಗುಂದ ಮತ್ತು ಇಳಕಲ್‌ ತಾಲೂಕಿನ ರೈತರ ಬದುಕಿಗೆ ಆಧಾರವಾಗಿರುವ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆಗಷ್ಟದವರೆಗೆ ನಮ್ಮ ರಾಜ್ಯದಲ್ಲಿ ಸತತ ಮಳೆಯಿಂದ ಸುಮಾರು 40 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಯಾಗಿದೆ ಅಂತ ಕಂದಾಯ ಇಲಾಖೆಯಲ್ಲಿ ವರದಿ ಇದೆ. ಇನ್ನು 10 ಸಾವಿರ ಎಕರೆಗೂ ಹೆಚ್ಚು ತೋಟಗಾರಿಕೆಯ ಬೆಳೆ ಹಾನಿಯಾಗಿದೆ ಎನ್ನುವ ಅಂದಾಜು ಕೂಡಾ ಇದೆ. ಆದರೆ ವಾಸ್ತವಾಗಿ ನೋಡಿದರೆ ಅಧಿಕೃತವಾಗಿ ಇದಕ್ಕಿಂತಲೂ ಎರಡು ಮೂರು ಪಟ್ಟು ರೈತರ ಬೆಳೆ ಹಾನಿಯಾಗಿದೆ. ಸರ್ಕಾರ ಕಂದಾಯ, ಕೃಷಿ, ತೋಟಗಾರಿಕೆ ಸಹಯೋಗದಲ್ಲಿ ಡ್ರೋನ್ ಆಧಾರಿತ ವೀಕ್ಷಣೆ ಯನ್ನು ನಡೆಸಿ, ವಾಸ್ತವ ಅಂಕಿ ಅಂಶಗಳನ್ನು ಪಡೆದುಕೊಂಡು ತಕ್ಷಣವೇ ರೈತರಿಗೆ ಮಧ್ಯಾಂತರ ಪರಿಹಾರವನ್ನು ಘೋಷಿಸಬೇಕು. ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರದ ಅಂಕಿ ಅಂಶಗಳ ಲೆಕ್ಕಾಚಾರದ ಮೇಲೆ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ಘೋಷಿಸಬೇಕು. ಎಂದು ಆಗ್ರಹಿಸಿದರು

ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ಶ್ರೀಕೃಷ್ಣ ಜಾಲಿಹಾಳ, ಶೇಖರಪ್ಪ ಬಾದವಾಡಗಿ, ಸುರೇಶ ಹಳಪೇಟೆ, ಬಿ.ವೈ.ಕೊಡಗಾನೂರ, ಚನ್ನಬಸಪ್ಪ ಶಾಂತಪ್ಪ ವೆಂಕಣ್ಣ ಗಿರಮಲ್ಲಪ್ಪ ಹಳಪೇಟೆ, ನಾರಾಯಣ ಇಳಕಲ್ಲ, ಶಂಕರಗೌಡ ಹೊಸಮನಿ, ನಾಗಪ್ಪ ಮಹಾಂತಯ್ಯ, ಕುರಕುಂಟಾ, ಮಲ್ಲಪ್ಪ ಕಡಪಟ್ಟಿ, ಕಿಡಿಯಪ್ಪ ಹೊಲಗೇರಿ ಹುಚ್ಚಪ್ಪ ಮಾವಿನಮರದ, ಹನಮಂತ ನಡುವಿನಮನಿ, ತಿಮ್ಮಾಪುರ ಗ್ರಾಮದ ರೈತ ಮುಖಂಡರಾದ ಕೃಷಿಕ ಸಮಾಜದ ನಿರ್ದೇಶಕ ಸಂಗಣ್ಣ ಕೆಂಗಲ್ ಶಿವನಗೌಡ ಹನುಮ ಗೌಡ್ರು ಹನುಮಂತಗೌಡ ಭಗವಂತ ಗೌಡರ ಗುತ್ತಿಗೆದಾರ ಸಿಕ್ರೇಶ ಹನುಮಗೌಡ್ರ ಶೇಖಣ್ಣ ಮುದುಕನ ಗೌಡ್ರು ಬಸವರಾಜ ಹೂನೂರ ಪ್ರವೀಣ ತೋಳಮಟ್ಟಿ ಆನಂದ ಶಿರೋಳ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group